July 9, 2020

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ಹೆಣ್ಣು / ಮಹಿಳೆಯು ತನಗೊಂದು ಸ್ವತಂತ್ರ ಬೇಕೆಂದು ಬಯಸುತ್ತಾಳೆ. ಬಹುಮುಖ್ಯವಾಗಿ ಪುರುಷ ಸಮಾಜದ ಸರಪಳಿಯಿಂದ ಹೊರಗೆ ಬರಲು ಆಶಿಸುತ್ತಾಳೆ. ಪ್ರತಿದಿನ / ಪ್ರತಿಕ್ಷಣ ಆಕೆ ಪಡುವ ಮಾನಸಿಕ, ದೈಹಿಕ ಕಷ್ಟಗಳನ್ನು ದಿಟ್ಟವಾಗಿ ಎದುರಿಸಲು ಪ್ರಯತ್ನಿಸುತ್ತಾಳೆ. 

'ಅಮ್ಮಚ್ಚಿಯೆಂಬ ನೆನಪು' ಸಿನಿಮಾದಲ್ಲಿ ಹಲವು ಸ್ತ್ರೀಯರಿದ್ದಾರೆ. ಪ್ರತಿಯೊಬ್ಬರ ಬದುಕಿನ ಪಯಣದಲ್ಲೂ ಒಂದೊಂದು ದುಃಖದ ಕಥೆಯಿದೆ. ಒಂದೊಂದು ಹೋರಾಟದ ಕಾದಂಬರಿಯಿದೆ. ನೆರೆಹೊರೆಯ ಮತ್ತು ಸಾಮಾಜಿಕ ಕಶ್ಟಗಳಿಗಿಂತ ಕೌಟಿಂಬಿಕ ಯುದ್ಧ ಗೆದ್ದ ಖುಷಿಯಿದೆ. ಹಲವು ದುಃಖಗಳ ನಡುವೆ ಗೆಲುವಿನ ನಗೆ ಕೆಲವೆಡೆ ಇದೆ.

ವೈದೇಹಿ ಮತ್ತು ಸಾ ರಾ ಅಬೂಬಕ್ಕರ್ ಅವರ ಬರಹಗಳನ್ನು ಓದುವಾಗ ಕಣ್ಣುಗಳು ಒದ್ದೆಯಾದರು, ನಾನು ಅಂತ ಕಷ್ಟಗಳು ಎಂದಾದರೂ ಎದುರಾದರೆ ಎದುರಿಸಬಲ್ಲೆ ಎಂಬ ಧೈರ್ಯ ಬರುತ್ತೆ. ಅವರ ಬರಹಗಳು ನಮಗೆ ಎಂದೆಂದಿಗೂ ಸ್ಫೂರ್ತಿದಾಯಕ. ಅವೆಲ್ಲವೂ ನನಗೆ ಬದು
ಕಲು ಹೇಳಿದ / ಪ್ರಚೋದಿಸಿದ ಪಾಠಗಳು.

ಈ ಸಿನಿಮಾದಲ್ಲಿ ಪುಟ್ಟಮ್ಮ, ಅಕ್ಕು, ಸೀತೆ, ಮತ್ತು ಅಮ್ಮಚ್ಚಿ ಪ್ರಮುಖ ಪಾತ್ರಗಳು. 

'ಪುಟ್ಟಮ್ಮತ್ತೆ' ಬಾಲ್ಯದಲ್ಲಿ ತನ್ನ ಕಣ್ಣ ಮುಂದೇ  ಪಾಪಿ ಸೋಮಾರಿ ತಂದೆಯಿಂದಾದ ಪ್ರೀತಿಯ ತಾಯಿಯ ಅಂತ್ಯ ಹಾಗೂ ತದ ನಂತರ ನೆರೆಹೊರೆಯ ಅಜ್ಜಿಯ ಮಮತೆಯಲ್ಲಿ ಬೆಳೆದ ಪುಟ್ಟಮ್ಮತ್ತೆ ಹದಿಹರೆಯಕ್ಕೆ ಬಂದಾಗ ಅಜ್ಜಿಯ ಮರಣ, ಮುಂದೇ ಮದುವೆಯಾಗಿ ಒಂದು ಮಗುವಿನ ಜನನ, ಪತಿಯ ಮರಣ. ವಿಧವೆ ಎಂದು ಎಲ್ಲರಿಂದ ಅನ್ನಿಸಿಕೊಂಡು ಬಹಳಷ್ಟು ಕಷ್ಟಗಳೊಂದಿಗೆ ಮಗಳನ್ನು ಸಾಕಿ ಆಕೆಗೊಂದು ಮಧುವೆ ಮಾಡಿ  ಮೊಮ್ಮಗಳಿಗೆ ಜನ್ಮ ಕೊಡುವ ಸಂಧರ್ಭದಲ್ಲಿ ಪುಟ್ಟಮ್ಮತ್ತೆ ತನ್ನ ಮಗಳನ್ನು ಕಳೆದು ಕೊಳ್ಳುತ್ತಾಳೆ. ಮತ್ತೆ ಮೊಮ್ಮಗಳನ್ನು ಸಾಕುವ ಜವಾಬ್ದಾರಿ ಹೊತ್ತ ಪುಟ್ಟಮ್ಮತ್ತೆ ತನ್ನ ಎಂದಿನ ಕೆಲಸವನ್ನು ಪುನರುವರ್ತಿಸುತ್ತಾಳೆ ತನ್ನ ಹಸಿವು ಮತ್ತು ಬಾಯಾರಿಕೆಯನ್ನು ತನ್ನ ಹೃದಯದಲ್ಲಿ ಬಚ್ಚಿಟ್ಟು. 

'ಅಕ್ಕು' ಮದುವೆಯಾಗಿ ಗರ್ಭಿಣಿಯಾದರೂ ಮಗುವಿಗೆ ಜನ್ಮಕೊಡುವ ಭಾಗ್ಯವನ್ನು ಪಡೆದಿರುವುದಿಲ್ಲ. ಇತ್ತ ಪತಿಯೂ ತನ್ನಿಂದ ದೂರವಾಗುತ್ತಾನೆ. ತದ ನಂತರ ಮಾನಸಿಕ ಅಸ್ವಸ್ಥೆಯಾಗಿ ಎಲ್ಲರಿಂದ ಬೈಗುಳ ಜೊತೆಗೆ ಮೈದುನನಿಂದ ಹೊಡೆತ ತಿನ್ನುವ ಪರಿಸ್ಥಿತಿ. ಆಕೆಯ ಪ್ರೀತಿಯ ಕರವಸ್ತ್ರ ಕಾಣೆಯಾದಾಗ ಪರಿತಪಿಸುವ ರೀತಿ ಮನಕಲುಕು ವಂತಹುದು. ದೂರವಾದ ಪತಿ ಕೆಲವು  ವರ್ಷಗಳ ನಂತರ ಆಸ್ತಿಗಾಗಿ ಮನೆಗೆ ಬಂದಾಗ 'ಅಕ್ಕು' ವಿನ ಮಾತುಗಳು. ಗರ್ಭಿಣಿಎಂದು ತಿಳಿದಿದ್ದರೂ ತನ್ನ ಸುಖಕ್ಕಾಗಿ 'ಅಕ್ಕು
ವನ್ನು ಬಲವಂತಿಸಿದ್ದು ಮಗು ಹೊಟ್ಟೆಯಲ್ಲಿ ಸತ್ತಿದ್ದು ಆಕೆ ಆತನನ್ನು ದ್ವೇಷಿಸಲು ಇದಕ್ಕಿಂತ ಕಾರಣ ಬೇಕೇ?. 

ಪುಟ್ಟಮತ್ತೆ ಮೊಮ್ಮಗಳು 'ಅಮ್ಮಚ್ಚಿಗೆ ತನ್ನ ಮದುವೆಯಾಗುವ ವ್ಯಕ್ತಿ ಬಗ್ಗೆ ಒಂದು ಆಸೆ ಇದ್ರೆ ವೆಂಕಪ್ಪನ ಕ್ರೂರತೆಯಿಂದ ಮನಸ್ಸಿಲ್ಲದಿದ್ದರೂ ಆತನೊಂದಿಗೆ ಮದುವೆಯಾಗಿ ತಿರುಪತಿಗೆ ತೆರಳುತ್ತಾಳೆ.ತಾನು ತುಂಬಾ ಓದಬೇಕು ಎಂಬ ಅಸೆ ಹಾಗು ತನ್ನ ಗಿಷ್ಟದ ಹುಡುಗನೊಂದಿಗೆ ಮದುವೆಯಾಗುವ ಕನಸು ಕ್ಷಣದಲ್ಲೇ ಕಮರಿ ಹೋದಾಗ 'ಅಮ್ಮಚ್ಚಿಗಾದ ದುಃಖ ಕೋಪ ...ವಿವರಿಸಲು ಪದಗಳಿಲ್ಲ.

ಹೆಣ್ಣುಮಕ್ಕಳನ್ನು ತಮಗಿಷ್ಟದಂದೇ ಉಪಯೋಗಿಸುವ  ವೆಂಕಪ್ಪ, ವಾಸು ಮುಂತಾದ ಪುರುಷರ ನಡುವೆ ಹೊಸ ತಲೆಮಾರಿನ ಚಿಕ್ಕ ಹುಡುಗನೋರ್ವನೇ ಸ್ವಲ್ಪ ಒಳ್ಳೆಯವನೇನೋ. ಅಥವಾ ತಲೆಮಾರು ಬದಲಾವಣೆಯ ಸೂಚನೆಯೋ?

ಕಥೆಗೆ ಎಲ್ಲಾ ಪಾತ್ರಧಾರಿಗಳು ಜೀವ ತುಂಬಿದ್ಧಾರೆ. ಅಕ್ಕು ಮತ್ತು ಪುಟ್ಟಮತ್ತೆ ಪಾತ್ರವನ್ನು ಬಹುಶಾ : ಬೇರೆ ಯಾರಿಂದಲೂ ಅಷ್ಟೊಂದು ಚೆನ್ನಾಗಿ ಮಾಡಲು ಸಾಧ್ಯವಿಲ್ಲ ಬಿಡಿ.

ಅಮ್ಮಚ್ಚಿ, ಸೀತಾ, ವೆಂಕಪ್ಪಯ್ಯ ಹೀಗೆ ಎಲ್ಲರೂ ಪ್ರತಿಭಾನ್ವಿತರೇ.  

ಸಿನೆಮಾ ಸಂಭಾಷಣೆ, ಹಾಡುಗಳು, ಫೋಟೋಗ್ರಫಿ ಎಲ್ಲವೂ ಸೊಗಸಾಗಿತ್ತು. ಎಲ್ಲಕ್ಕೂ ಹೆಚ್ಚಾಗಿ 'ವೆಂಕಪ್ಪಯ್ಯ ಸತ್ತ' ಎನ್ನುವ ಕೊನೆಯ ಮಾತು. ವ್ಹಾವ್ .

ಇಂತಹ ಸಿನಿಮಾಗಳು ಇನ್ನಷ್ಟು ಬರಲಿ.


Photo Credit : Prajavani

October 1, 2017

ವಿದಾಯ ಹೇಳಬಂದಾಗ ಕಾಡುವ ಸವಿನೆನಪು

ಶ್!! ಇದು ಮೌನದ ಸಮಯ. ಮಾತು ಮರೆಯುವ ಸಮಯ. ಮನದಲ್ಲಿ ನೂರು ನೋವುಗಳು ತುಂಬಿರುವ ಸಮಯ.
ಹೌದು. ಇದು ವಿದಾಯ ಹೇಳುವ ಸಮಯ....
ಹೆದರಬೇಡಿ ನಾನು ಬ್ಲಾಗಿಗಾಗಲೀ, ಬ್ಲಾಗ್ ಸ್ನೇಹಿತರಿಗಾಗಲಿ ವಿದಾಯ ಹೇಳುತ್ತಿಲ್ಲ! ಹೇಳುವುದೂ ಇಲ್ಲ. ಏಕೆಂದರೆ ಬ್ಲಾಗ್ ನನ್ನ ಒಂಟಿತನವನ್ನು ದೂರವಿರಿಸಲು ನಾನು ಕಂಡುಕೊಂಡ ಹೊಸ ವಿಧಾನ.
ಸ್ನೇಹ ಮಾಡಬಾರದು. ಮಾಡಿದ ಕೆಲವು ತಿಂಗಳುಗಳಲ್ಲೇ ದೂರವಾಗುವ ಸನ್ನಿವೇಷ ಬಂದಾಗ ತುಂಬಾನೇ ಬೇಜಾರಾಗುತ್ತದೆ ಎಂಬ ಅರಿವಿದ್ದರೂ ಮತ್ತೆ ಬೇಡ ಬೇಡವೆಂದರೂ ಇತರರ ಒಳ್ಳೆಯತನಕ್ಕೆ ಮರುಳಾಗಿ ಸ್ನೇಹಿತರಾಗುತ್ತೇವೆ. ಕಾಲೇಜು ಸಂದರ್ಭದಲ್ಲಿ ಅದೆಷ್ಟು ಸಂತೋಷದಿಂದಿದ್ದೇವೊ ಅದನ್ನು ಮರು ನೆನಪಿಸಲು ಪಿಜಿ ಸ್ನೇಹಿತರು ನನಗೆ ಜತೆಯಾದರು.

ಜತೆಜತೆಯಲ್ಲೇ ತಿರುಗಾಟ(ಬೆಂಗಳೂರಿನ ಎಲ್ಲಾ ಶಾಪಿಂಗ್ ಷಾಪ್ ಗಳು), ಧರ್ಮ ಬೇರೆಯಾದರೂ ದರ್ಗ, ದೇವಸ್ಥಾನ ಗಳಿಗೆಲ್ಲಾ ಮುರು ಧರ್ಮದವರೂ ಜತೆಯಾಗಿ ಹೋಗಿ ಇತರರನ್ನು ಹೊಟ್ಟೆ ಉರಿಸಿದ್ದು, ಬೆಳಿಗ್ಗೆ ಜಗಳವಾಡಿ ರಾತ್ರಿ ಜತೆಯಾಗಿ ಊಟಮಾಡಿದ್ದು, ನಾನ್ ವೆಚ್ ಗಾಗಿ ಎಲ್ಲೆಡೆ ಹೋದದ್ದು, ಬೇಡ ಬೇಡವೆಂದರೂ ಪ್ರತಿ ಶನಿವಾರ ಚಿಕನ್ ತರಿಸಿ ತಿಂದದ್ದು, ಗೋಳಾಡಿಸಿದ್ದು, ಹೊಸ ವರ್ಷ, ಕ್ರಿಸ್ಮಸ್ ಸಂಭ್ರಮವನ್ನು ರಾತ್ರಿ ೧೨ರ ನಂತರನೂ ಡ್ಯಾನ್ಸ್ ಜೊತೆಗೆ ಸಂಭ್ರಮಿಸಿದ್ದು, ಹುಟ್ಟಿದ ಹಬ್ಬಗಳ ಭರ್ಜರಿ ಪಾರ್ಟಿ... ಹೋಲಿ ದಿನವನಂತೂ ಮರೆಯಲ್ಲಿಕ್ಕೇ ಸಾಧ್ಯವಿಲ್ಲ. ರಾತ್ರಿಯಿಡೀ ರೇಡಿಯೋ ಆನ್ ಇಟ್ಟು ಮಲಗಿದ್ದು, ಫೂಲ್ ಮಾಡೋಕೆ ಹೋಗಿ ನಾನೇ ಫೂಲ್ ಆದದ್ದು... ಎಲ್ಲವೂ ಇನ್ನು ಬರಿಯ ಸವಿನೆನಪು ಮಾತ್ರ.


ಕಣ್ಣೀರು, ಸಂತೋಷ ಎಲ್ಲವನ್ನು ಸಮನಾಗಿ ಹಂಚಿದ್ದು!! ಗೆಳತಿ ಹೇಗೆ ಮರಿಯಲಿ ನಾ! ಅ ಮಧುರ ದಿನಗಳನ್ನು! ಮಧುರ ಕ್ಷಣಗಳನ್ನು!


ನನಗೆ ಗೊತ್ತು ಇನ್ನು ನಮ್ಮ ಸ್ನೇಹ ಬರಿಯ ಫೋನ್ ಕರೆಗಳಿಗೆ, ಎಸ್ಎಂಎಸ್ ಮತ್ತು ಮೇಲ್ ಸಂದೇಶಗಳಿಗೆ ಮಾತ್ರ ಮೀಸಲೆಂದು.
ಗೀ, ನಿಧಿ ನನ್ನ ಬಿಟ್ಟು ಬೆಂಗಳೂರನ್ನು ತೊರೆದು ಹೋದಾಗ ನಾನು ಭಾಗಶ: ಮೌನಿ ಯಾಗಿದ್ದೆ. ಅದು ಅನಿರೀಕ್ಷಿತ ಅಘಾತವಾಗಿತ್ತು. ಜತೆಯಾಗಿ ಇರುತ್ತೇವೆ ಅಂದುಕೊಂಡದ್ದು ಸಾಧ್ಯವಾಗಲೇ ಇಲ್ಲ. ಬದಲಾವಣೆಯನ್ನು ಬಯಸಿ ಅವರು ದೂರವಾದರು.

ಈಗ, ನಾz, ಪ್ರೀತಿ, ಅನಿ ಎಲ್ಲರೂ ಜೀವನದ ಪಯಣದ ಮಹತ್ತರ ಬದಲಾವಣೆಯ ಉದ್ದೇಶವಾಗಿ ರೂಮನ್ನು, ಬೆಂಗಳೂರಿನ ಈ ಪ್ರಪಂಚವನ್ನು ತೊರೆದು ತಮ್ಮ ಊರಿಗೆ ತೆರಲುತಿದ್ದಾರೆ. ಬೇಡ ಅನ್ನಲೇ... ಅದೇಗೆ ತಡೆಯಲಿ ಅವರನ್ನು...?

ನಾವಂದು ಕೊಂಡ ಹಾಗೇ ಯಾವುದೂ ಸಾಧ್ಯವಿಲ್ಲ... ಪುಸ್ತಕದ ಹುಳುವಾಗಿದ್ದ ನಾ ಪುಸ್ತಕವನ್ನೇ ಮರೆತಿದ್ದೆ! ಬರಹಗಳೆಲ್ಲಾ ಮರೆತೇ ಹೋಗಿತ್ತು. ಈಗ ಮತ್ತೆ ಪ್ರಾರಂಭಿಸಬೇಕು... ಒಂಟಿತನ ದೂರವಾಗಿಸಬೇಕು...

ಇರಲಿ ನೆನಪಿರಲಿ ನಮ್ಮ ಗೆಳೆತನದ ಸವಿ ನೆನಪಿರಲಿ. ಈ ನೆನಪೇ ಶಾಶ್ವತವೂ ಅದುವೇ ಚಿರ ನೂತನವೂ... ಮನು ಗುನು ಗುನುಡುತ್ತಿದ್ದ ಹಾಡು ಮತ್ತೆ ನೆನಪಾಗುತ್ತಿದೆ.

ಮಾತುಗಳು

ಕಳೆದು ಹೋದ ನಿನ್ನೆಗಳ ಕುರಿತು ಕೊರಗಬೇಡಿ. ನಾಳೆಗಳು ಬರಬಹುದು. ಆದರೆ ಇಂದು ಇಂದಿಗೆ ಮಾತ್ರ. ಅದನ್ನು ತಪ್ಪಿಸಿಕೊಳ್ಳಬೇಡಿ. ಅನುಭವಿಸಿ, ಖುಷಿಪಡಿ.

ಇನ್ನೊಬ್ಬರು ನಿಮಗೆ ನೋವುಂಟು ಮಾಡಿದಾಗ ಬೇಸರಿಸಿ ಕೊಳ್ಳಬೇಡಿ. ಯಾಕೆಂದರೆ, ಸಿಹಿಯಾದ ಹಣ್ಣುಗಳನ್ನು ನೀಡುವ ಮರಕ್ಕೇ ಹೆಚ್ಚಿನ ಕಲ್ಲೇಟು ಬೀಳುವುದು.

ಒಂದೇ ತಾಯಿಯ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಸಹಜವಾಗಿರುವಾಗ, ಬಸ್ಸಿನಲ್ಲಿ, ಕಚೇರಿಯಲ್ಲಿರುವವರ ಜತೆಯು ಅದು ಸಹಜ. ಭಿನ್ನಾಭಿಪ್ರಾಯ ಬಂತೆಂದು ಮನೆ ಮುರಿಯಲಾಗುವುದಿಲ್ಲ. ಹಾಗೆಯೇ ಮನಸ್ಸನ್ನೂ ಮುರಿದುಕೊಳ್ಳಬಾರದು.

ಬಹುಶ: ನೇಮಿಚಂದ್ರ ಬರೆದಂತಹ ವಾಕ್ಯಗಳಿರಬಹುದು  

September 26, 2011

ದುಡಿತಕ್ಕೆ ಬೆಲೆಯಿಲ್ಲ ಮಂಗಳೂರಿನಲ್ಲಿ

ಮಂಗಳೂರಿನವರು ಬುದ್ದಿವಂತರು, ಶ್ರಮಜೀವಿಗಳು ಎಲ್ಲಾ ಕ್ಷ್ತೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.ಒಂದೇ ಮಾತಿನಲ್ಲಿ ಹೇಳುವುದಾದರೆ ಅಂಡರ್ ವರ್ಡ್ (ಎಮ್ ರೈ) ನಿಂದ ಹಿಡಿದು ಮಿಸ್ ವರ್ಡ್ (ಐಶ್ವರ್ಯ ರೈ) ವರೆಗೂ ನಮ್ಮ ಮಂಗಳೂರಿನವರೇ ಎದ್ದು ಕಾಣುತ್ತಾರೆ. 

ವಿದ್ಯೆಗಾಗಿ ಎಲ್ಲೆಲ್ಲಿಂದಲೋ ವಿದ್ಯಾರ್ಥಿಗಳು ಬಂದು ಮಂಗಳೂರಿನಲ್ಲೇ ಬೀಡು ಬಿಡುತ್ತಿದ್ದಾರೆ. ಅಲ್ಲಲ್ಲಿ  ಅಂತರ್ - ಧಾರ್ಮಿಕ ಕಲಹಗಳು ನಡೆಯುತ್ತಿದ್ದಾರೂ ಮಂಗಳೂರು ನಿಜಕ್ಕೂ ಶಾಂತೀಪ್ರಿಯ ನಗರ. ನಿನ್ನೆ ಕಿತ್ತಾಡಿದ ಜನ ಇಂದು ಒಂದಾಗುತ್ತಿದ್ದಾರೆ. ಸದ್ದಿಲ್ಲದೆ ಇತರೆ ಧರ್ಮಿಯರ ಹಬ್ಬ ಸಡಗರಗಳಲ್ಲಿ ತಾವೂ ಭಾಗಿಯಾಗಿ ಸಂಭ್ರಮಿಸುತ್ತಾರೆ. 

ಆಧುನಿಕತೆಗೆ ಪ್ರೋತ್ಸಾಹಿಸುವುದರ ಜೊತೆಗೆ ಯುವಜನತೆ ಪಾಶ್ಚಾತ್ಯ ಸಂಸ್ಕ್ರತಿಗೆ ಮಾರು ಹೋಗದಂತೆ ತಡೆಯುವ ಕೆಲವು ತಂಡಗಳು ಮಂಗಳೂರನ್ನು ಬಹು ಬೇಗನೆ ಕೆಡದಂತೆ ನೋಡಿಕೊಳ್ಳುತ್ತಿವೆ. ಕಳೆದ್ ೩ ವರ್ಷಗಳಿಂದ ಒಂದಿಲ್ಲೊಂದು ಸುದ್ದಿಯಿಂದ ಮಂಗಳೂರು ಬಿಬಿಸಿಯಲ್ಲೂ ಬಿಸಿ ಬಿಸಿ ಚರ್ಚೆಗೆ ವಸ್ತುವಾಗಿದ್ದದ್ದು ನಮಗೆಲ್ಲರಿಗೂ ನೆನಪಿದೆ.

ಪಾರ್ಕ್ ಗಳಿಲ್ಲದ್ದಿದ್ದರೂ ಮಂಗಳೂರು ಸೌಂದರ್ಯವನ್ನು ಕಡಾಲ ಕಿನಾರೆ ಹೆಚ್ಚಿಸುತ್ತಿದ್ದು, ಆಧಿಕಾರಿಗಳನ್ನು ಸದಾ ಎಚ್ಚರಿಸುವ ಸಾರ್ವಜನಿಕರು...ಇಷ್ಟೆಲ್ಲಾ ಇದ್ರೂ ಮಂಗಳೂರು ಉದ್ಯೋಗಕ್ಕೆ ತಕ್ಕುದಾದ ಬೆಲೆ ತೆರಲು ಹಪಹಪಿಸುತ್ತಿದೆ.

ಎಂಪಸಿಸ್, ಇನ್ಘೋಸಿಸ್ ಮುಂತಾದ ಪ್ರಮುಖ ಕಂಪೆನಿಗಳು ಮಂಗಳೂರಿನಲ್ಲಿ ಬೀಡು ಬಿಟ್ಟಿವೆ... ಹಲವಾರು ವಿದ್ಯಾವಂತರು ಇತರೆಡೆಗೆ ಪಯಣಿಸದೆ ಮಂಗಳೂರಿನಲ್ಲೇ ಇರುವ ಕಂಪೆನಿಗಳಲ್ಲಿ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗಿಗಳು ಮಾಡುವ ಕೆಲಸವನ್ನೇ ಇಲ್ಲೂ ಮಾಡುತ್ತಿದ್ದಾರೆ. ಆದರಿಲ್ಲಿ ಸಂಬಳಕ್ಕೆ ಮಾತ್ರ ಬರಗಾಲ. ಜುಜುಬಿ ಸಂಬಳ ಸಾಕಾಗಿಲ್ಲ ವೆಂದರೆ ಕಂಪೆನಿ ಬಿಟ್ಟು ಹೋಗಿ ಎನ್ನಲು ಕಂಪೆನಿಯ ಅಧಿಕಾರಿಗಳು ಹಿಂಜರಿಯುವುದಿಲ್ಲ. ರಾತ್ರಿಯೆಲ್ಲಾ ಬಿಪಿಓ ಕಂಪೆನಿಗಳಲ್ಲಿ ದುಡಿದರೂ ತಿಂಗಳ ಸಂಬಳ ೪,೦೦೦/- ಹೆಚ್ಚೆಂದರೆ ೭,೦೦೦/-  ಉಳಿದ ಕಡೆಗಳಲ್ಲಿ ಹೆಚ್ಚಿನ ಎಲ್ಲಾ ಶ್ರಮಜೀವಿಗಳಿಗೂ ಮಂಗಳೂರಿನಲ್ಲಿ ತಿಂಗಳ ಸಂಬಳ ೩,೦೦೦. ಆಶ್ಚರ್ಯವಾದರೂ ಇದು ವಾಸ್ತವ. 

ನಾಲ್ಕೈದು ಮಂದಿ ಮಾಡುವ ಕೆಲಸವನ್ನು ಒಬ್ಬರಿಂದಲೇ ಮಾಡಿಸಿದರೂ ಸಂಬಳದ ವಿಷಯ ಬಂದಾಗ ಬಾಸ್ ಸೈಲೆನ್ಸ್.
ಖರ್ಚು ವಿಷಯ ಬಂದಾಗ ಮಂಗಳೂರು ಯಾವ ವಿಷಯದಲ್ಲೂ ಮಹಾ ನಗರಿಗೆ ಕಮ್ಮಿ ಇಲ್ಲ ಬಿಡಿ. ಮನೆಯ ಕಸಕಡ್ಡಿಗಳನ್ನು ಕೊಂಡೊಯ್ಯುವ ಗಾರ್ಬೇಜ್ ನವನಿಗೆ ೨ ವಾರಕ್ಕೊಮ್ಮೆ ೧೫ ರೂಪಾಯಿ ನೀಡಲೇ ಬೇಕು. ಇಲ್ಲವಾದಲ್ಲಿ ಅವ ಮಾಯ! ಸರ್ಟಿಫಿಕೆಟ್ ಎಟೆಸ್ಟೇಷನ್ ಗೆ ಶಾಲೆಗೆ ಹೋದರೆ ಮುಖ್ಯೊಪಾದ್ಯಯರು ಪ್ರತೀ ಸಹಿಗೆ ೨೫ ರೂ ಸ್ವೀಕರಿಸುತ್ತಾರೆ.

ಇನ್ನು ಕಳ್ಳ ಕಾಕರ ಮಹಿಮೆಯನ್ನು ಸಾರಲು ಮಂಗಳೂರಿನ ಎಲ್ಲಾ ಪತ್ರಿಕೆಗಳಲ್ಲೂ ಸ್ಥಳವೇ ಸಾಕಾಗುತ್ತಿಲ್ಲ. ಪ್ರತೀ ದಿನ ವಿನೂತನ ರೀತಿಯಲ್ಲಿ ಕಳ್ಳರು ತಮ್ಮ ಬುದ್ದಿವಂತಿಕೆ ತೋರಿಸುತ್ತಿದ್ದಾರೆ. ಕಡಲ ಕಿನಾರೆಯಲ್ಲಿರುವ ಮರಳನ್ನು ಅಕ್ರಮವಾಗಿ ರಾಶಿ ರಾಶಿಯಾಗಿ ಲಾರಿಗಳಲ್ಲಿ ಕೊಂಡೊಯ್ಯುವವರ ಸಂಖ್ಯೆಯೆನೂ ಕಮ್ಮಿಯಿಲ್ಲ....

ಕಳ್ಳತನ ನಗರದಲ್ಲಿ ಹೆಚ್ಚಲು ನಿರುದ್ಯೋಗನೇ ಪ್ರಮುಖ ಕಾರಣ... ವಿದ್ಯಾಬ್ಯಾಸ ವಿದ್ದರೂ ಉದ್ಯೋಗವಿಲ್ಲ, ಉದ್ಯೋಗವಿದ್ದರೂ ನ್ಯಾಯಯುತ ಸಂಬಳದ ಕೊರತೆಯಿಂದ ಜನ ನಿರಾಶಿತರಾಗಿದ್ದಾರೆ.

July 29, 2011

ವಿರಾಮದ ಬಳಿಕ ಮತ್ತೆ ಬ್ಲಾಗ್ ಲೋಕ

ವಿರಾಮ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಸಿಗುತ್ತೆ. 

January 10, 2011

Nick Name (ಅಡ್ಡ ಹೆಸರು) ತರಲೆಗಳು!

ಈ ಅಡ್ಡ ಹೆಸರುಗಳ ಮಲಾಮತಿಯಿಂದ ಇಂದು ನಾವು ನಿಜವಾದ ಹೆಸರುಗಳನ್ನೇ ಮರೆಯುತ್ತೇವೆ. ಒಂದು ಕಾಲದಲ್ಲಿ ಬರಿ ಮನೆ ಮಂದಿಗೆ ಅಥವಾ ಆತ್ಮೀಯ ಸ್ನೇಹಿತರೊಳಗೆ ಮಾತ್ರ ಇರುತ್ತಿದ್ದ ಅಡ್ಡ ಹೆಸರುಗಳ ಬಳಕೆ ಇಂದು ಪ್ರಪಂಚದಾದ್ಯಂತ ವಿಸ್ತರಿಸಿದೆ. ಮಾಧ್ಯಮಗಳಂತೂ ತಮಗಿಷ್ಟಬಂದಂತೆ ಅಡ್ಡ ಹೆಸರುಗಳನ್ನು ಬಳಸುತ್ತಿದ್ದಾರೆ. ಯುಡಿಯೂರಪ್ಪ "ಯಡ್ಡಿ" ಯಾದರೆ, ಒಬಾಮಾ "ದೊಡ್ಡಣ್ಣ"ನಂತೆ! ಸಚ್ಚಿನ್ ತೆಂಡ್ಕುಲರ್ ದೇವರಂತೆ! ಕತ್ರಿನಾ ಕೈಫ್ "ಕ್ಯಾಟ್", ಇನ್ಯಾರೊ "ಡಾಗ್" ಮತ್ತಿನ್ಯಾರೋ ಡಾನ್ ಅಂತೆ! ಒಬ್ಬರು ಚಿಂಕೆ ಮರಿಯಾದರೆ ಇನ್ನೊಬ್ಬರು ಕರಿಚಿರತೆ ಯಂತೆ!

ಇನ್ನು ಕೆಲವು ಮಾಮೂಲು ಅಡ್ಡ ಹೆಸರುಗಳಿವೆ. ಅವುಗಳಲ್ಲಿ ಪ್ರಮುಖವಾದದು ಇಡಿಯಟ್, ಲಂಬು, ಡುಮ್ಮ....
ಅಡ್ಡಹೆಸರುಗಳ ಪಟ್ಟಿ ಮಾಡುವುದಾದರೆ ಅದೆಷ್ಟೊ ಇವೆ ಬಿಡಿ. ಅದನ್ನು ಬರೆಯಲು ಪುರುಸೊತ್ತು ನನಗೂ ಇಲ್ಲ, ಓದುವ ಸಹನೆ ನಿಮಗೂ ಇರಲ್ಲ! ಅದ್ರೆ ಒಂದು ಮಾತ್ರ ನಿಜ ಕಣ್ರಿ... ಪ್ರತಿ ಅಡ್ಡ್ ಹೆಸರುಗಳ ಹಿಂದೆ ಒಂದೊಂದು ಕತೆ ಇದೆ, ಕೆಲವೊಮ್ಮೆ ಅದು ಕಾದಂಬರಿಯಾಗಲೂ ಬಹುದು.

ಅಡ್ಡ ಹೆಸರಿನ ಅಪತ್ತುಗಳ ವಿವರ ನೀಡ ಹೊರಟರೆ ಅದು ಮುಗಿಯದ ಪುರಾಣ! ಅದ್ರೂ ಒಂದು ನಿದರ್ಶನ ಕೊಡುವುದಾದರೆ, ಒಮ್ಮೆ ನನ್ನ ಅಂಕಲ್ "ಜೆರಾಲ್ಡ್" ಎಂಬವರು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ನಮ್ಮ ಡ್ಯಾಡಿ ಅವರನ್ನು ನೋಡಲೆಂದು ಆಸ್ಪತ್ರೆಗೆ ಹೋಗಿ, "ಜೆರಿ" (ಅವರ ಅಡ್ಡ ಹೆಸರು) ಯಾವ ವಾರ್ಡ್ ನಲ್ಲಿ ದಾಖಲಾಗಿದ್ದಾರೆ ಎಂದು ಕೇಳಿದಾಗ ಆ ಹೆಸರಿನವರು ಯಾರು ಇಲ್ಲ ಎಂದು ಪ್ರತಿಕ್ರಿಯೆ ಬಂದಾಗ ಪಟ್ಟ ಪಾಡು ಅಷ್ಟಿಷ್ಟಲ್ಲ...

ಹೆಚ್ಚಿನೆಡೆ ಅಡ್ಡ ಹೆಸರುಗಳು ಹಾಸ್ಯಾಸ್ಪದವಾಗಿದ್ದರೆ, ಇನ್ನು ಕೆಲವೆಡೆ ನಿಜ ಹೆಸರುಗಳೇ ಹಾಸ್ಯಾಸ್ಪದವಾಗಿರುತ್ತವೆ. ಉದಾಹರಣೆಗೆ ಕೆಲವರ ಹೆಸರುಗಳೇ ಹೀಗಿವೆ: ಶ್ರೀಮತಿ, ಕುಮಾರಿ, ಬಣ್ಣ, ಪಚ್ಚ, ಮಚ್ಚ, ಗುಗ್ಗು...

ಓ ಮರೆತೆ ಬಿಡಿ... ಅಂದಹಾಗೆ ನಿಮ್ಮ ಅಡ್ಡ ಹೆಸರು ಏನು?


June 22, 2010

ಐಶ್ವರ್ಯ ರೈ ಅಂದಾಕ್ಷಣ...

ತನ್ನ ಎರಡು ನೀಲಿ ಬಣ್ಣದ ಕಣ್ಣುಗಳಿಂದ ಜಗ್ಗತ್ತನ್ನು ಸೂರೆಗೊಂಡ ಮಂಗಳೂರು ಬೆಡಗಿ, ಆಕೆ ಸೌಂದರ್ಯದ ರೂಪಕಿ, ಬಾಲಿವುಡ್ ತಾರೆ, ಅಭಿಷೇಕ್ ಮಡದಿ ಹೀಗೆ ಸಾವಿರಾರು ಬಗೆಯ ಅಭಿಪ್ರಾಯಗಳು ಐಶ್ವರ್ಯ ರೈ ಬಗ್ಗೆ ಬರೆಯಿರಿ ಎಂದಾಕ್ಷಣ ನಮ್ಮುಂದೆ ಬರುತ್ತವೆ.

ಆದರೆ!! ಇಲ್ಲಿ ನೋಡಿ ಕೆಲವು  ಜನರ ಅನಿಸಿಕೆಗಳು! ಕುತೂಹಲಕಾರಿಯಾಗಿವೆ!!

  • ದೇವರೂ ಇತ್ತೀಜೆಗೆ ತೀರಾ ಸ್ವಾರ್ಥಿಯಾಗಿಬಿಟ್ಟ,
          ಸೌಂದರ್ಯ, ಹೆಸರು, ಕೀರ್ತಿ, ವೈಡೂರ್ಯ, ಸಂಪತ್ತು ಎಲ್ಲವನ್ನೂ ಒಂದೆಡೆ ಸುರಿದು ಬಿಟ್ಟ.

  • ಸೌಂದರ್ಯವೆನ್ನುವುದು ಒಂದು ಮಳೆಯಂತೆ
         ಕೆಲವೊಮ್ಮೆ ಅತಿವ್ರಷ್ಠಿ

         ಇನ್ನು ಕೆಲವೊಮ್ಮೆ ಅನಾವ್ರಷ್ಠಿ
        
         ಎರಡೂ ತೊಂದರೇನೆ...

ಐಶ್ವರ್ಯವೆಂದರೆ, ಬಂಡವಾಳಶಾಹಿಗಳು ತಮ್ಮ ಟೂತ್ ಪೇಶ್ಟ್, ಒಡವೆ, ಸಾಬೂನು, ವಸ್ತ್ರ
ಮುಂತಾದವುಗಳನ್ನು ಮಾರಾಟ ಮಾಡಲು ಬಳಸುವ ಒಂದು ಅಸ್ತ್ರ!!

ಅವಳದೇನು ಸೌಂದರ್ಯ ಬಿಡಿ!
ಅವಳಿಗಿಂತಲೂ ಸುಂದರಿಯರು ನಮ್ಮ ಸ್ಲಂಗಳಲ್ಲಿ ಹಲವರಿದ್ದಾರೆ.
ಅದರೇನು ಮಾಡುವುದು ಅವರಿಗೆ ಮುಖ ತೊಳೆಯಲು ನೀರಿಲ್ಲವಾಗಿದೆ.

ನಿಮಗೇನು ಅನ್ನಿಸುತಿದೆ???

My first byline : A moment I will never forget

 A few years ago, I had a dream to entering in the field of Journalism. That is why I chose Mass Communication and Journalism for my master...