November 14, 2007

ಸವಿನೆನಪಾಗಿ ಉಳಿದ ವೀಣಾಧರಿ


ಸಂದರ್ಶನವನ್ನು ಹೇಗೆ ಮಾಡುವುದೆಂಬುದರ ಕುರಿತಾಗಿ ಹೆಚ್ಚೆನೂ ಗೊತ್ತಿಲ್ಲದ ದಿನಗಳಲ್ಲಿ ನಾನು ವೀಣಾಧರಿ ಅವರ ಸಂದರ್ಶನ ಮಾಡಿದ್ದೆ. ಅದು ನನ್ನ ಪ್ರಪ್ರಥಮ ಸಂದರ್ಶನವೂ ಆಗಿತ್ತು. ವೀಣಾಧರಿ ಅದಾಗಲೇ ಚಿರ ಪರಿಚಿತರು. ರವಿ ಬೆಳಗೆರೆಯಿಂದ ವೀಣಕ್ಕ ಎಂದೇ ಕರೆಯಲ್ಪಟ್ಟವರು. ವೀಣಾಧರಿ ಅವರನ್ನು ಪ್ರಥಮ ಬಾರಿ ನೋಡಿದಾಗ ನನಗೆ ಆಶ್ಚರ್ಯವಾಗಿತ್ತು. HIV ಪಾಸಿಟಿವ್ ಮಹಿಳೆ ಇಷ್ಟೊಂದು ಸಂತಸದಿಂದಿರಲು ಹೇಗೆ ಸಾಧ್ಯ? ಅವರ ಅ ಕ್ರಿಯಾಶೀಲತೆ ಮುಖದಲ್ಲಿ ಕಾಣುತ್ತಿರುವ ಉಮ್ಮಸ್ಸು ಕಂಡು ವ್ಹಾರೆವ್ಹಾ she is really great ಎಂದು ಮನದಲ್ಲೇ ಅಭಿನಂದಿಸಿದೆ.

ತಾನು ಇತರೆ ಕೆಲಸದಲ್ಲಿ ನಿರತರಾಗಿರುವಾಗಲೇ ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಕ್ಯಾಮೆರಾ ಕೈಕೊಟ್ಟಿದ್ದರಿಂದ ಅವರೊಂದಿಗೆ ನಿಂತು ಫೋಟೋ ತೆಗಿಸಬೇಕೆಂದುಕೊಂಡ ಆಶೆ ಅಂದು ನೆರವೇರಲಿಲ್ಲ. ವೀಣಾಧರಿಗೆ ನನ್ನ ಕೊನೇಯ ಪ್ರಶ್ನೆ ಹೀಗಿತ್ತು: ನೀವು ಹೀಗೆ ಏಡ್ಸ್ ರೋಗಿಗಳಿಗೆ ಆಶಾಕಿರಣವಾಗಲು ಹೋಗಿ, ಜನರಲ್ಲಿ ಏಡ್ಸ್ ಕುರಿತ ಭಯ ದೂರವಾಗಿ ಅನೈತಿಕ ಚಟುವಟಿಕೆಗಳು ಹೆಚ್ಚಾಗುವುದಿಲ್ಲವೇ?

ನನ್ನ ಪ್ರಶ್ನೆಯಿಂದ ಅವರು ತುಂಬಾನೇ ಬೇಸರಗೊಂಡಿದ್ದರು. ನಾನು ಆ ಪ್ರಶ್ನೆಯನ್ನು ವೀಣಾಧರಿ ಎಂಬ ಉತ್ತಮ ಸಮಾಜ ಸೇವಕಿಗೆ ಕೇಳಬಾರದಿತ್ತೇನೊ ಎಂದು ಮತ್ತೆ ನನಗೆ ಅನ್ನಿಸಿತ್ತು. ಆ ಸಂದರ್ಶನ ನಂತರ ಮತ್ತೆ ಒಂದೆರಡು ಬಾರಿ ನಾನು ಅವರನ್ನು ಬೇಟಿಯಾಗಿದ್ದೆ.

ಅದೊಂದು ಸಮಾರಂಭದಲ್ಲಿ ವೀಣಾಧರಿ ಹೇಳಿದ್ದರು ಏಡ್ಸ್ ಎಂದಾಕ್ಷಣ ಸಾವಲ್ಲ ಯಾವ ಖಾಯಿಲೆಗೂ ಇಲ್ಲದ ವಿಶೇಷ ದಿನ ಏಡ್ಸ್ ರೋಗಕ್ಕೆ ಯಾಕೆ? ಏಡ್ಸ್ ರೋಗಿಗಳನ್ನು ಅಷ್ಟೊಂದು ಕೇವಲವಾಗಿ ನೋಡುವ ಅವಶ್ಯಕತೆಗಳಿಲ್ಲ. ಇತ್ತೀಜೆಗೆ ಏಡ್ಸ್ ರೋಗಿಗಳಿಂದ ವೈದ್ಯರುಗಳು ಬ್ಲ್ಯಾಕ್ ಮೇಲ್ ಮಾಡಿ ಲಕ್ಷಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಏಡ್ಸ್ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಅಂಕಿ ಅಂಶಗಳೆಲ್ಲ ಸುಳ್ಳು. ಒಬ್ಬ ಏಡ್ಸ್ ರೋಗಿಯನ್ನು ಅವನು ಹೋದ ಕಡೆಯಲೆಲ್ಲ ಪರೀಕ್ಷಿಸಿ ನೊಂದಣಿ ಮಾಡಿಸುತ್ತಾರೆ. ಇದರಿಂದ ಅಂಕಿ ಅಂಶಗಳಲ್ಲಿ ಏರು ಪೇರಾಗುತ್ತಿದೆ.

ವೈದ್ಯರುಗಳಿಂದ ಹಾಗೂ ಇತರೆ ಸಂಸ್ಥೆಗಳಿಂದ ವಂಚಿತರಾದ HIV ಪೀಡಿತರು ತಮ್ಮ ಸಮಸ್ಯೆಗಳನ್ನು ಬರೆದಂತಹ ಹಲವಾರು ದಾಖಲೆಯ ಪತ್ರಗಳು ತಮ್ಮಲ್ಲಿ ಇವೆ. ಅವುಗಳನ್ನು ಸಂಗ್ರಹಿಸಿಟ್ಟಿದ್ದೇವೆ. ಮುಂದೊಂದು ದಿನ ಇವೆಲ್ಲವುಗಳಿಗೂ ಪರಿಹಾರ ಒದಗಿಸುತ್ತೇನೆ ಎಂದಿದ್ದ ವೀಣಾಧರಿ ಇಂದು ನಮ್ಮಿಂದ ಬಹುದೂರ ಹೋಗಿದ್ದಾರೆ. ಅವರ ಸಾವಿನ ಸುತ್ತ ಹಲವು ಅನುಮಾನಗಳಿವೆ ಎಂಬ ಅಂಶದೆಡೆಗೆ ಇತ್ತಿಚೆಗೆ ಮಾಧ್ಯಮಗಳು ಪ್ರಕಟಿಸಿದ್ದವು. ಅವುಗಳನ್ನು ನಿರ್ಲಕ್ಷಿಸುವಂತಿಲ್ಲ.

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...