February 27, 2008

ನನ್ನ ಸಾವಿಗೆ ನಾನೇ ಕಾರಣ!!!

ಆತ್ಮಹತ್ಯೆ ಮಾಡುವವರು ದೈರ್ಯಶಾಲಿಗಳಾ ಅಥವಾ ಹೇಡಿಗಳಾ? ಆತ್ಮಹತ್ಯೆ ಮಾಡಲು ಸಾಮಾನ್ಯರಿಗಂತೂ ಅಸಾಧ್ಯವಂತೆ ನಿಜನಾ?ಸಾವಿಗೆ ಹೆದರದವರು ಯಾರಿಗೆ ಹೆದರಿ ಸಾವಿಗೆ ಶರಣಾಗುತ್ತಾರೆ?
ಕಳೆದ ಹಲವಾರು ವರ್ಷಗಳಿಂದ ಮಾಧ್ಯಮಗಳಲ್ಲಿ ಪ್ರಕಟವಾದಂತಹ ಆತ್ಮಹತ್ಯೆ ಪ್ರಕರಣಗಳಲ್ಲಿ ‘ನನ್ನ ಸಾವಿಗೆ ನಾನೇ ಕಾರಣ’ ಎಂಬ ಪತ್ರ ಬರೆದು ಆಕೆ/ಆತ ಸಾವಿಗೆ ಶರಣಾಗಿದ್ದಾಳೆ/ನೆ ಎಂಬ ವಾಕ್ಯವನ್ನು ಓದುತ್ತಿರುತ್ತೇವೆ.

ಆತ್ಮಹತ್ಯೆ ಮಾಡುವ ಮನಸ್ಸು ಜನರಿಗೆ ಹೇಗೆ ಬರುತ್ತೆ? ಬಂದಂತಹ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಇಲ್ಲವೇ? ಅಥವಾ ಪ್ರಪಂಚದಲ್ಲಿ ತಾನೇ ಈ ಪರಿಯ ದುಃಖ ಬೇಸರವನ್ನು ಅನುಭವಿಸುತ್ತಿದ್ದೇನೆ. ಉಳಿದವರೆಲ್ಲರೂ ಅದ್ರಷ್ಟಶಾಲಿಗಳು. ತಾನು ಮಾತ್ರ ಈ ಪ್ರಪಂಚಕ್ಕೆ ಬಾರವಾಗಿಬಿಟ್ಟೆ ಎಂಬ ದುರ್ಬಲ ಯೋಚನೆಗಳೇ ಆತ್ಮಹತ್ಯೆ ಮಾಡಲು ಪ್ರಚೋದಿಸುತ್ತವೆಯೇ? ತಾವು ಎದುರಿಸಿದ ಕಷ್ಟಗಳನ್ನೇ ಈ ಜನ ಯಾಕೆ ಚಾಲೆಂಚ್ ಆಗಿ ಸ್ವೀಕರಿಸುವುದಿಲ್ಲ? ತನ್ನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಇವರು ಯಾಕೆ ಸಾಧಿಸಿ ತೋರಿಸಬಾರದು. ಒಂದಿಬ್ಬರು ಏನೋ ಹೇಳಿದ ಮಾತ್ರಕ್ಕೆ, ಮೋಸ ಮಾಡಿದ ಮಾತ್ರಕ್ಕೆ, ಸುಳ್ಳು ಅರೋಪ ಹೊರಿಸಿದ ಮಾತ್ರಕ್ಕೆ, ಅಪಪ್ರಚಾರ ಮಾಡಿದ್ದಕ್ಕೆ, ತನ್ನ ಘನತೆಗೆ ದಕ್ಕೆ ಬರುವಂತೆ ವರ್ತಿಸಿದ್ದಕ್ಕೆ, ತನ್ನಿಂದ ತಪ್ಪಿಲ್ಲದಿದ್ದರೂ ಅಪರಾಧಿ ತರಹ ನೋಡಿದ್ದಕ್ಕೆ, ಅದ್ಯಾರೊ ಸುಮ್ ಸುಮ್ನೆ ಬೈದದಕ್ಕೆ ಅತ್ಯಹತ್ಯೆ ಒಂದೇ ದಾರಿಯಾಗಿ ಬಿಟ್ಟಿತ್ತೇ?

ಸಾವಿನ ನಂತರ ಸ್ವರ್ಗ ಮತ್ತು ನರಕ ಗಳೆರಡು ಸ್ಥಳಗಳಲ್ಲಿ ಒಂದಕ್ಕೆ ಹೋಗಬೇಕಾದ ಅನಿವಾರ್ಯ ಇದೆ ಎಂದರಿತ ಜನ ಸಾಯುವ ಮುಂಚೆ ‘ ನನ್ನ ಸಾವಿಗೆ ನಾನೇ ಕಾರಣವೆಂದು ಬರೆದು ಉಳಿದವರಿಗೆ ಆಗಬಹುದಾದ ಶಿಕ್ಷೆ ತಪ್ಪಿಸಿ, ಅವರಿಂದ ಸತ್ತವರು ಗ್ರೇಟ್ ಎನ್ನಿಸಿದಾಕ್ಷಣ ಆತ್ಮಹತ್ಯೆ ಮಾಡಿದವರಿಗೆ ಸ್ವರ್ಗ ಶಿಕ್ಷೆ ಲಭಿಸುತ್ತೇನು?

ಹಾಗೇ ಪತ್ರ ಬರೆದಾಕ್ಷಣ ಎಲ್ಲಾ ಪರಿಹಾರವಾಗುತ್ತಾ? ಆಕೆ / ಆತನ ಸಾವಿಗೆ ಮನೆಯವರೊ/ ಸ್ನೇಹಿತರೊ ಅಥವ ಇನ್ನಾರೊ ಕಾರಣ.. ಇಲ್ಲದಿದ್ದರೆ ಆಕೆ/ಆತ ಆತ್ಮಹತ್ಯೆ ಮಾಡುತ್ತಿರಲಿಲ್ಲ ಎಂಬ ಹುಳ ಎಲ್ಲರ ಮನದಲ್ಲೂ ಮನೆಮಾತಾಗಿರುವುದಿಲ್ಲವಾ?

ಅನ್ಯಾಯ ಕಂಡಾಕ್ಷಣ ಸಾವಿಗೆ ಶರಣಾಗುವ ಬದಲು ಅನ್ಯಾಯವನ್ನು ದಿಟ್ಟವಾಗಿ ಪ್ರತಿಭಟಿಸಿ ಸಾಯಲು ಸಿದ್ದರಿರಬೇಕೆಂದು ಯಾಕೆ ಯಾರು ಯೋಚಿಸುತ್ತಿಲ್ಲ. ಆತ್ಮಹತ್ಯೆ ಮಾಡಲೇ ಬೇಕೆಂಬ ಇಚ್ಛೆ ಇದ್ದರೆ ಪ್ಲೀಸ್ ಮೊದಲು ಏನನ್ನಾದರೂ ಸಾಧಿಸಿ... ನಿಮ್ಮಿಂದ ಒಂದಿಬ್ಬರಿಗಾದರೂ ಒಳಿತಾಗಲಿ. ನಿಮ್ಮ ಸಾವಿನಿಂದ ಇತರರಿಗೆ ತ್ರಪ್ತಿ, ನೆಮ್ಮದಿ, ಸಂತೋಷ ಸಿಗುತ್ತದೆ ಎಂಬ ತಪ್ಪು ಕಲ್ಪನೆ ಖಂಡಿತ ಬೇಡ. ವಿದ್ಯಾವಂತರಾಗಿಯು ಚಿಲ್ಲರೆ ವಿಷಯಗಳಿಗೆ ನೊಂದು ಆತ್ಮಹತ್ಯೆ ಮಾಡಲು ಮುಂದೆ ಹೋಗುವ ನೀವುಗಳು ಹೇಡಿಗಳೇ ಸರಿ...

ನಿಮ್ಮ ಜನನಕ್ಕೆ ನೀವು ಕಾರಣವಲ್ಲ! ಆಗಿದ್ದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಹಕ್ಕು ನಿಮಗಿಲ್ಲ.. ಪ್ರಪಂಚದಲ್ಲಿ ಅದೆಷ್ಟು ಮಂದಿ ತಮ್ಮ ಕುಟುಂಬದವರನ್ನೆಲ್ಲಾ ಕಳೆದು ಕೊಂಡು, ಭಯಾನಕ ಖಾಯಿಲೆ ಬಂದಿದ್ದರೂ ನೊಂದು ಕೊಳ್ಳದೇ ಬದುಕಿ ಸಾಧಿಸಿದ್ದಾರೆ. ನಮ್ಮ ನಾಳೆಗಳು ನಮಗಾಗಿ ಕಾದಿರುತ್ತವೆ. ಅವುಗಳನ್ನು ಹಸನ್ಮುಖದಿಂದ ಸ್ವೀಕರಿಸೋಣ.

ಮತ್ತೂ ಸಾಯಲೇ ಬೇಕೆಂದು ನಿರ್ಧರಿಸಿದ್ದರೆ ಒಂದ್ನಿಮಿಷ... ನಿಮ್ಮ ಸುತ್ತಮುತ್ತಲು ನಡೆಯುವ ಹಗರಣ, ಮೋಸ, ವಂಚನೆಗಳನ್ನು ಬಯಲಿಗೆಳೆದು she/he is great ಅಂತ ಅನ್ನಿಸಿಕೊಳ್ಳಿ.. ಬಹುಶಃ ಆ ಹೊತ್ತಿಗೆ ನಿಮ್ಮ ಆತ್ಮಹತ್ಯೆಯ ಯೋಚನೆ ಮಾರುದೂರ ಹೋಗಿರುತ್ತೆ.

February 4, 2008

ಮನುವಿನ ನೂಪುರ ಭ್ರಮರಿ

ಹಾಯ್,


ನನಗೊಬ್ಬಳು ಗೆಳತಿಯಿದ್ದಾಳೆ. ಶುದ್ಧ ತರಲೆ ಅಂಥನೇ ಹೇಳಬಹುದು. ನನಗಿಂತಲೂ ಒಂದು ಪಟ್ಟು ಜಾಸ್ತಿನೇ ಅವಳ ತುಂಟಾಟಗಳು ನಡೆಯುತ್ತವೆ ಎಂದರೂ ತಪ್ಪಾಗದು. ಅವಳ ಮೇಲೆ ಪ್ರೀತಿ ಹೆಚ್ಚಾದಗೆಲ್ಲಾ ನನ್ನ ಮೊಬೈಲ್ ನಲ್ಲಿ ಅವಳ ಹೆಸರು ಮನು ಎಂದಿರುತ್ತಿದ್ದರೆ, ಕೋಪ ಬಂದಾಗ ಮನೋರಮಾ ಬಿ ಎನ್ ಎಂದು ಪೂರ್ಣ ಹೆಸರನ್ನು ಕಾಣಬಹುದು.

ಈ ಮನುಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ದೈರ್ಯವಿಲ್ಲ ಎಂಬುದಾಗಿ ಒಂದೊಮ್ಮೆ ನಾನು ಕನ್ನಡ ಪ್ರಭದ ‘ಕಾಲೇಜು ರಂಗ’ದ ಮುಖಾಂತರ ತಿಳಿಸಿದ್ದೆ. ಆ ದಿನಗಳಲೆಲ್ಲಾ ಆಕೆ ನನ್ನಲ್ಲಿ ಮಾತು ಬಿಟ್ಟಿದ್ದಳು. ಆದ್ರೂ ನಮ್ಮಿಬ್ಬರಲ್ಲಿ ಅದೆನೋ ಹೊಂದಾಣಿಕೆ, ಆತ್ಮೀಯತೆ ಇತ್ತು.


ಕ್ಷಮಿಸಿ. ಇಂದು ಅವಳ ಬಗ್ಗೆ ಬ್ಲಾಗಿನಲ್ಲಿ ಬರೆಯಲು ಮುಖ್ಯ ಕಾರಣ.... ಅವಳು ಭರತನಾಟ್ಯಂ ಹಾಗೂ ಇತರೆ ನ್ರತ್ಯಗಳ ಕುರಿತಾಗಿನ ತನ್ನದೇ ಆದ ದ್ವೈಮಾಸಿಕ (ಎರಡು ತಿಂಗಳಿಗೊಮ್ಮೆ) ವೊಂದನ್ನು ಕಳೆದ ಒಂದು ವರ್ಷದ ಹಿಂದೆ ಆರಂಭಿಸಿದ್ದಳು. ‘ನೂಪುರ ಭ್ರಮರಿ’ ಕಳೆದ ಒಂದು ವರ್ಷದಲ್ಲೇ ಬಹು ಖ್ಯಾತಿಯನ್ನೇ ಪಡೆಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಇದೇ ಫೆಬ್ರವರಿ ೧೦ರಂದು ಮಡಿಕೇರಿಯಲ್ಲಿ ‘ನೂಪುರ ಭ್ರಮರಿ’ಯ ವರ್ಷಾಚರಣೆಯು ಸಾಯಂಕಾಲ ೪ ಗಂಟೆಗೆ ಭಾರತೀಯ ವಿದ್ಯಾ ಭವನ ಮಡಿಕೇರಿಯ ದೇವಸ್ಥಾನ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದಲ್ಲಿ ನಡೆಯಲಿದೆ. ಅಂದು ‘ನೂಪುರ ಭ್ರಮರಿ’ಯ ವೆಬ್ ಸೈಟನ್ನು ಉದ್ಟಾಟಿಸುವ ಗುಟ್ಟೊಂದನ್ನು ಮನು ನನ್ನಲ್ಲಿ ತಿಳಿಸಿದ್ದಾಳೆ...
ಮನು ನಿನಗೆ ನನ್ನ ಆತ್ಮೀಯ ವಂದನೆಗಳು. ನಿನ್ನ ಕಾರ್ಯದಲ್ಲಿ ಯಶಸ್ಸು ಲಭಿಸಲಿ ಎನ್ನುವ ಹಾರೈಕೆ ನಿನ್ನ ಜಗಳಗಂಟಿ ಗೆಳತಿಯದು.

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...