September 26, 2011

ದುಡಿತಕ್ಕೆ ಬೆಲೆಯಿಲ್ಲ ಮಂಗಳೂರಿನಲ್ಲಿ

ಮಂಗಳೂರಿನವರು ಬುದ್ದಿವಂತರು, ಶ್ರಮಜೀವಿಗಳು ಎಲ್ಲಾ ಕ್ಷ್ತೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.ಒಂದೇ ಮಾತಿನಲ್ಲಿ ಹೇಳುವುದಾದರೆ ಅಂಡರ್ ವರ್ಡ್ (ಎಮ್ ರೈ) ನಿಂದ ಹಿಡಿದು ಮಿಸ್ ವರ್ಡ್ (ಐಶ್ವರ್ಯ ರೈ) ವರೆಗೂ ನಮ್ಮ ಮಂಗಳೂರಿನವರೇ ಎದ್ದು ಕಾಣುತ್ತಾರೆ. 

ವಿದ್ಯೆಗಾಗಿ ಎಲ್ಲೆಲ್ಲಿಂದಲೋ ವಿದ್ಯಾರ್ಥಿಗಳು ಬಂದು ಮಂಗಳೂರಿನಲ್ಲೇ ಬೀಡು ಬಿಡುತ್ತಿದ್ದಾರೆ. ಅಲ್ಲಲ್ಲಿ  ಅಂತರ್ - ಧಾರ್ಮಿಕ ಕಲಹಗಳು ನಡೆಯುತ್ತಿದ್ದಾರೂ ಮಂಗಳೂರು ನಿಜಕ್ಕೂ ಶಾಂತೀಪ್ರಿಯ ನಗರ. ನಿನ್ನೆ ಕಿತ್ತಾಡಿದ ಜನ ಇಂದು ಒಂದಾಗುತ್ತಿದ್ದಾರೆ. ಸದ್ದಿಲ್ಲದೆ ಇತರೆ ಧರ್ಮಿಯರ ಹಬ್ಬ ಸಡಗರಗಳಲ್ಲಿ ತಾವೂ ಭಾಗಿಯಾಗಿ ಸಂಭ್ರಮಿಸುತ್ತಾರೆ. 

ಆಧುನಿಕತೆಗೆ ಪ್ರೋತ್ಸಾಹಿಸುವುದರ ಜೊತೆಗೆ ಯುವಜನತೆ ಪಾಶ್ಚಾತ್ಯ ಸಂಸ್ಕ್ರತಿಗೆ ಮಾರು ಹೋಗದಂತೆ ತಡೆಯುವ ಕೆಲವು ತಂಡಗಳು ಮಂಗಳೂರನ್ನು ಬಹು ಬೇಗನೆ ಕೆಡದಂತೆ ನೋಡಿಕೊಳ್ಳುತ್ತಿವೆ. ಕಳೆದ್ ೩ ವರ್ಷಗಳಿಂದ ಒಂದಿಲ್ಲೊಂದು ಸುದ್ದಿಯಿಂದ ಮಂಗಳೂರು ಬಿಬಿಸಿಯಲ್ಲೂ ಬಿಸಿ ಬಿಸಿ ಚರ್ಚೆಗೆ ವಸ್ತುವಾಗಿದ್ದದ್ದು ನಮಗೆಲ್ಲರಿಗೂ ನೆನಪಿದೆ.

ಪಾರ್ಕ್ ಗಳಿಲ್ಲದ್ದಿದ್ದರೂ ಮಂಗಳೂರು ಸೌಂದರ್ಯವನ್ನು ಕಡಾಲ ಕಿನಾರೆ ಹೆಚ್ಚಿಸುತ್ತಿದ್ದು, ಆಧಿಕಾರಿಗಳನ್ನು ಸದಾ ಎಚ್ಚರಿಸುವ ಸಾರ್ವಜನಿಕರು...ಇಷ್ಟೆಲ್ಲಾ ಇದ್ರೂ ಮಂಗಳೂರು ಉದ್ಯೋಗಕ್ಕೆ ತಕ್ಕುದಾದ ಬೆಲೆ ತೆರಲು ಹಪಹಪಿಸುತ್ತಿದೆ.

ಎಂಪಸಿಸ್, ಇನ್ಘೋಸಿಸ್ ಮುಂತಾದ ಪ್ರಮುಖ ಕಂಪೆನಿಗಳು ಮಂಗಳೂರಿನಲ್ಲಿ ಬೀಡು ಬಿಟ್ಟಿವೆ... ಹಲವಾರು ವಿದ್ಯಾವಂತರು ಇತರೆಡೆಗೆ ಪಯಣಿಸದೆ ಮಂಗಳೂರಿನಲ್ಲೇ ಇರುವ ಕಂಪೆನಿಗಳಲ್ಲಿ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗಿಗಳು ಮಾಡುವ ಕೆಲಸವನ್ನೇ ಇಲ್ಲೂ ಮಾಡುತ್ತಿದ್ದಾರೆ. ಆದರಿಲ್ಲಿ ಸಂಬಳಕ್ಕೆ ಮಾತ್ರ ಬರಗಾಲ. ಜುಜುಬಿ ಸಂಬಳ ಸಾಕಾಗಿಲ್ಲ ವೆಂದರೆ ಕಂಪೆನಿ ಬಿಟ್ಟು ಹೋಗಿ ಎನ್ನಲು ಕಂಪೆನಿಯ ಅಧಿಕಾರಿಗಳು ಹಿಂಜರಿಯುವುದಿಲ್ಲ. ರಾತ್ರಿಯೆಲ್ಲಾ ಬಿಪಿಓ ಕಂಪೆನಿಗಳಲ್ಲಿ ದುಡಿದರೂ ತಿಂಗಳ ಸಂಬಳ ೪,೦೦೦/- ಹೆಚ್ಚೆಂದರೆ ೭,೦೦೦/-  ಉಳಿದ ಕಡೆಗಳಲ್ಲಿ ಹೆಚ್ಚಿನ ಎಲ್ಲಾ ಶ್ರಮಜೀವಿಗಳಿಗೂ ಮಂಗಳೂರಿನಲ್ಲಿ ತಿಂಗಳ ಸಂಬಳ ೩,೦೦೦. ಆಶ್ಚರ್ಯವಾದರೂ ಇದು ವಾಸ್ತವ. 

ನಾಲ್ಕೈದು ಮಂದಿ ಮಾಡುವ ಕೆಲಸವನ್ನು ಒಬ್ಬರಿಂದಲೇ ಮಾಡಿಸಿದರೂ ಸಂಬಳದ ವಿಷಯ ಬಂದಾಗ ಬಾಸ್ ಸೈಲೆನ್ಸ್.
ಖರ್ಚು ವಿಷಯ ಬಂದಾಗ ಮಂಗಳೂರು ಯಾವ ವಿಷಯದಲ್ಲೂ ಮಹಾ ನಗರಿಗೆ ಕಮ್ಮಿ ಇಲ್ಲ ಬಿಡಿ. ಮನೆಯ ಕಸಕಡ್ಡಿಗಳನ್ನು ಕೊಂಡೊಯ್ಯುವ ಗಾರ್ಬೇಜ್ ನವನಿಗೆ ೨ ವಾರಕ್ಕೊಮ್ಮೆ ೧೫ ರೂಪಾಯಿ ನೀಡಲೇ ಬೇಕು. ಇಲ್ಲವಾದಲ್ಲಿ ಅವ ಮಾಯ! ಸರ್ಟಿಫಿಕೆಟ್ ಎಟೆಸ್ಟೇಷನ್ ಗೆ ಶಾಲೆಗೆ ಹೋದರೆ ಮುಖ್ಯೊಪಾದ್ಯಯರು ಪ್ರತೀ ಸಹಿಗೆ ೨೫ ರೂ ಸ್ವೀಕರಿಸುತ್ತಾರೆ.

ಇನ್ನು ಕಳ್ಳ ಕಾಕರ ಮಹಿಮೆಯನ್ನು ಸಾರಲು ಮಂಗಳೂರಿನ ಎಲ್ಲಾ ಪತ್ರಿಕೆಗಳಲ್ಲೂ ಸ್ಥಳವೇ ಸಾಕಾಗುತ್ತಿಲ್ಲ. ಪ್ರತೀ ದಿನ ವಿನೂತನ ರೀತಿಯಲ್ಲಿ ಕಳ್ಳರು ತಮ್ಮ ಬುದ್ದಿವಂತಿಕೆ ತೋರಿಸುತ್ತಿದ್ದಾರೆ. ಕಡಲ ಕಿನಾರೆಯಲ್ಲಿರುವ ಮರಳನ್ನು ಅಕ್ರಮವಾಗಿ ರಾಶಿ ರಾಶಿಯಾಗಿ ಲಾರಿಗಳಲ್ಲಿ ಕೊಂಡೊಯ್ಯುವವರ ಸಂಖ್ಯೆಯೆನೂ ಕಮ್ಮಿಯಿಲ್ಲ....

ಕಳ್ಳತನ ನಗರದಲ್ಲಿ ಹೆಚ್ಚಲು ನಿರುದ್ಯೋಗನೇ ಪ್ರಮುಖ ಕಾರಣ... ವಿದ್ಯಾಬ್ಯಾಸ ವಿದ್ದರೂ ಉದ್ಯೋಗವಿಲ್ಲ, ಉದ್ಯೋಗವಿದ್ದರೂ ನ್ಯಾಯಯುತ ಸಂಬಳದ ಕೊರತೆಯಿಂದ ಜನ ನಿರಾಶಿತರಾಗಿದ್ದಾರೆ.

July 29, 2011

ವಿರಾಮದ ಬಳಿಕ ಮತ್ತೆ ಬ್ಲಾಗ್ ಲೋಕ

ವಿರಾಮ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಸಿಗುತ್ತೆ. 

February 23, 2011

ಯಾಕಯ್ತು ಹೀಗೆ ನಮ್ಮ ಪತ್ರಿಕೆಗಳು!

ದಿನಾಲೂ ಎಲ್ಲಾ ಪತ್ರಿಕೆಗಳನ್ನು ಓದುವ ನನಗೆ ಒಂದು ಪತ್ರಿಕೆಯನ್ನು ಇನ್ನೊಂದು ಪತ್ರಿಕೆಯೊಡನೆ ಹೋಲಿಸಿ ನೋಡುವ ಹುಚ್ಚು ಹೆಚ್ಚು. ಹೆಚ್ಚಿನ ಸಂದರ್ಭಗಳಲ್ಲಿ ಒಂದು ಪ್ರಮುಖ ವಿಷಯವನ್ನು ವಿವಿಧ ಪತ್ರಿಕೆಗಳು ಯಾವೆಲ್ಲಾ ರೀತಿಯಲ್ಲಿ ಪ್ರಕಟಿಸುತ್ತಾರೆ ಎಂದು ನೋಡುತ್ತಿರುತ್ತೇನೆ. ಇತ್ತೀಚೆಗೆ ಕನ್ನಡ ಪತ್ರಿಕೋದ್ಯಮದಲ್ಲಾದ ಮಹತ್ತರ "ಸಂಪಾದಕೀಯ" ಬದಲಾವಣೆಯ ನಂತರ ಇದರೆಡೆಗೆ ಆಸಕ್ತಿ ಇನ್ನೂ ಹೆಚ್ಚಿತು. ಇಂದು ಮಾಮೂಲಿಯಾಗಿ ನನ್ನ ಕಣ್ಣನ್ನು ಪತ್ರಿಕೆಗಳತ್ತ ಹೊರಡಿಸುವಾಗ ಆಕರ್ಷಕವಾಗಿ ಕಂಡಿದ್ದು ಉದಯವಾಣಿ ಪತ್ರಿಕೆಯ ಮುಖ ಪುಟ... ಅರೆ ಇದೇನಿದು ಗುಡ್ ನ್ಯೂಸ್ ಮತ್ತು ಬ್ಯಾಡ್ ನ್ಯೂಸ್ ಅನ್ನು ವಿಭಾಗವಾಗಿ ಮಾಡಿದ್ದಾರೆ. ಅಷ್ಟೇ ಅಲ್ಲ ಗೋಧ್ರಾ ತೀರ್ಪಿನ ಬಗ್ಗೆ ಉಳಿದೆಲ್ಲಾ ಪತ್ರಿಕೆಗಳಿಗಿಂತ ವಿಶೇಷವಾಗಿ ವರದಿಯನ್ನು ನೀಡಿದ್ದಾರೆ.

ಅಪರೂಪಕ್ಕೊಮ್ಮೆ ಎದ್ದೇಳುವ ಉದಯವಾಣಿ ಇಂದಿನಿಂದ ಮರು ಉದಯ ವಾಗುತ್ತೇನೋ ಅನಿಸಿತು. ಆಗೊಂದು ವೇಳೆ ಆದರೆ ಕನ್ನಡ ಪತ್ರಿಕೋದ್ಯಮವೂ ಮರುಕಳಿಸುತ್ತದೆ ಎನ್ನಬಹುದೇನೋ...

ವಿಜಯಕರ್ನಾಟಕದ ಲವಲVK ಈಗ ಮೊದಲಿನಂತಿಲ್ಲ... ಪ್ರಮುಖ ಸುದ್ದಿಗಳಿದ್ದರೂ ಜಾಹಿರಾತುಗಳ ಸಂಖ್ಯೆಯೇ ಹೆಚ್ಚಿದೆ. ಹಾಗಂತ ತನ್ನತನವನ್ನು ಈ ಪತ್ರಿಕೆ ಕಳೆದುಕೊಂಡಿಲ್ಲ!

ಪ್ರಜಾವಾಣಿಯ ಪ್ರಮುಖ ಪುಟಗಳಿಗಿಂತ ಪುರವಾಣಿ ಪುಟಗಳೇ ಹೆಚ್ಚು ಹಿತವಾಗಿರುತ್ತವೆ.  ಕನ್ನಡ ಪ್ರಭ ಬದಲಾಗುತ್ತೆ ಬಹು ಬೇಗನೇ ಎಂದು ಅಂದುಕೊಂಡರೆ ಏನೂ ಆಗಿಲ್ಲ (ಇವತ್ತಿನ ಮೊದಲ ಪುಟದಲ್ಲಿ ಮಾಸ್ಟ್ ಹೆಡ್ ನಲ್ಲಿ ಆಚಾರ್ಯ ಮತ್ತು ಪ್ರಿಯಾಂಕಾ ತಂಗಿ ಪೋಟೊ ಕ್ಯಾಪ್ಶನ್ ಇದೆ - ಅದೇಕೆ ಸುದ್ದಿಯಲ್ಲದ ಸುದ್ದಿಗಳನ್ನು ಪ್ರಮುಖ ಸುದ್ದಿ ಮಾಡುತ್ತಾರೋ ತಿಳಿಯುತ್ತಿಲ್ಲ)

ಸಂಯುಕ್ತ ಕರ್ನಾಟಕ ಪರ್ವಾಗಿಲ್ಲ...

ಇನ್ನೊಂದು ಪ್ರಮುಖ ವಿಚಾರವೆಂದರೆ ಇತ್ತೀಚೆಗೆ ನಡೆದ ಚರ್ಚ್ ದಾಳಿ ಸಂಬಂದಿ ಹೊರಬಿದ್ದ ಸೋಮಶೇಖರ್ ವರದಿಯನ್ನು ವಿರೋದಿಸಿ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಬ್ರಹತ್ ಸಮಾವೇಶ ಏರ್ಪಟ್ಟಿತ್ತು. ಮಂಗಳೂರಿನಲ್ಲಿ ನಡೆದ ಬ್ರಹತ್ ಸಮಾವೇಶಕ್ಕೆ ೧.೨೫ ಲಕ್ಷ ಜನರು ಉಪಸ್ಥಿತರಿದ್ದರೆ, ಆ ಸಂದರ್ಭದಲ್ಲಿ  ಅವರಿಗೆ ರಕ್ಷಣೆಗಿಳಿದ ಪೋಲಿಸ್ ಅಧಿಕಾರಿಗಳ ಸಂಖ್ಯೆ ಕೇವಲ ೪೦... ಅದೇ ದಿನ ಬೆಂಗಳೂರಿನಲ್ಲಿ ನಡೆದಂತಹ ಇನ್ನೊಂದು ಪ್ರಮುಖ ಕಾರ್ಯಕ್ರಮಕ್ಕೆ ಬ್ರಹತ್ ಪ್ರಮಾಣದ ರಕ್ಷಣೆಯನ್ನು ನೀಡಲಾಗಿತ್ತು. ಈ ಸುದ್ದಿಯನ್ನು ಯಾವೊಂದು ಪತ್ರಿಕೆಯೂ ಬಹಿರಂಗ ಪಡಿಸಿಲ್ಲ... ಬಹುಶ: ಇಂತಹ ಪ್ರಮುಖವೆನ್ನಿಸುವ ಸುದ್ದಿಗಳು ಅವರಿಗೆ ಸಿಗುವುತ್ತಿಲ್ಲವೇನೋ? ಅಥವಾ ಅವೆಲ್ಲಾ ಸುದ್ದಿಗಳೇ ಅಲ್ಲವೆನೋ... ಸುದ್ದಿ ಆಯ್ಕೆ, ಅದನ್ನು ಪ್ರಕಟಪಡಿಸುವುದು ಆಯಾ ಪತ್ರಿಕೆಗಳ ಕಸುಬು...

January 10, 2011

Nick Name (ಅಡ್ಡ ಹೆಸರು) ತರಲೆಗಳು!

ಈ ಅಡ್ಡ ಹೆಸರುಗಳ ಮಲಾಮತಿಯಿಂದ ಇಂದು ನಾವು ನಿಜವಾದ ಹೆಸರುಗಳನ್ನೇ ಮರೆಯುತ್ತೇವೆ. ಒಂದು ಕಾಲದಲ್ಲಿ ಬರಿ ಮನೆ ಮಂದಿಗೆ ಅಥವಾ ಆತ್ಮೀಯ ಸ್ನೇಹಿತರೊಳಗೆ ಮಾತ್ರ ಇರುತ್ತಿದ್ದ ಅಡ್ಡ ಹೆಸರುಗಳ ಬಳಕೆ ಇಂದು ಪ್ರಪಂಚದಾದ್ಯಂತ ವಿಸ್ತರಿಸಿದೆ. ಮಾಧ್ಯಮಗಳಂತೂ ತಮಗಿಷ್ಟಬಂದಂತೆ ಅಡ್ಡ ಹೆಸರುಗಳನ್ನು ಬಳಸುತ್ತಿದ್ದಾರೆ. ಯುಡಿಯೂರಪ್ಪ "ಯಡ್ಡಿ" ಯಾದರೆ, ಒಬಾಮಾ "ದೊಡ್ಡಣ್ಣ"ನಂತೆ! ಸಚ್ಚಿನ್ ತೆಂಡ್ಕುಲರ್ ದೇವರಂತೆ! ಕತ್ರಿನಾ ಕೈಫ್ "ಕ್ಯಾಟ್", ಇನ್ಯಾರೊ "ಡಾಗ್" ಮತ್ತಿನ್ಯಾರೋ ಡಾನ್ ಅಂತೆ! ಒಬ್ಬರು ಚಿಂಕೆ ಮರಿಯಾದರೆ ಇನ್ನೊಬ್ಬರು ಕರಿಚಿರತೆ ಯಂತೆ!

ಇನ್ನು ಕೆಲವು ಮಾಮೂಲು ಅಡ್ಡ ಹೆಸರುಗಳಿವೆ. ಅವುಗಳಲ್ಲಿ ಪ್ರಮುಖವಾದದು ಇಡಿಯಟ್, ಲಂಬು, ಡುಮ್ಮ....
ಅಡ್ಡಹೆಸರುಗಳ ಪಟ್ಟಿ ಮಾಡುವುದಾದರೆ ಅದೆಷ್ಟೊ ಇವೆ ಬಿಡಿ. ಅದನ್ನು ಬರೆಯಲು ಪುರುಸೊತ್ತು ನನಗೂ ಇಲ್ಲ, ಓದುವ ಸಹನೆ ನಿಮಗೂ ಇರಲ್ಲ! ಅದ್ರೆ ಒಂದು ಮಾತ್ರ ನಿಜ ಕಣ್ರಿ... ಪ್ರತಿ ಅಡ್ಡ್ ಹೆಸರುಗಳ ಹಿಂದೆ ಒಂದೊಂದು ಕತೆ ಇದೆ, ಕೆಲವೊಮ್ಮೆ ಅದು ಕಾದಂಬರಿಯಾಗಲೂ ಬಹುದು.

ಅಡ್ಡ ಹೆಸರಿನ ಅಪತ್ತುಗಳ ವಿವರ ನೀಡ ಹೊರಟರೆ ಅದು ಮುಗಿಯದ ಪುರಾಣ! ಅದ್ರೂ ಒಂದು ನಿದರ್ಶನ ಕೊಡುವುದಾದರೆ, ಒಮ್ಮೆ ನನ್ನ ಅಂಕಲ್ "ಜೆರಾಲ್ಡ್" ಎಂಬವರು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ನಮ್ಮ ಡ್ಯಾಡಿ ಅವರನ್ನು ನೋಡಲೆಂದು ಆಸ್ಪತ್ರೆಗೆ ಹೋಗಿ, "ಜೆರಿ" (ಅವರ ಅಡ್ಡ ಹೆಸರು) ಯಾವ ವಾರ್ಡ್ ನಲ್ಲಿ ದಾಖಲಾಗಿದ್ದಾರೆ ಎಂದು ಕೇಳಿದಾಗ ಆ ಹೆಸರಿನವರು ಯಾರು ಇಲ್ಲ ಎಂದು ಪ್ರತಿಕ್ರಿಯೆ ಬಂದಾಗ ಪಟ್ಟ ಪಾಡು ಅಷ್ಟಿಷ್ಟಲ್ಲ...

ಹೆಚ್ಚಿನೆಡೆ ಅಡ್ಡ ಹೆಸರುಗಳು ಹಾಸ್ಯಾಸ್ಪದವಾಗಿದ್ದರೆ, ಇನ್ನು ಕೆಲವೆಡೆ ನಿಜ ಹೆಸರುಗಳೇ ಹಾಸ್ಯಾಸ್ಪದವಾಗಿರುತ್ತವೆ. ಉದಾಹರಣೆಗೆ ಕೆಲವರ ಹೆಸರುಗಳೇ ಹೀಗಿವೆ: ಶ್ರೀಮತಿ, ಕುಮಾರಿ, ಬಣ್ಣ, ಪಚ್ಚ, ಮಚ್ಚ, ಗುಗ್ಗು...

ಓ ಮರೆತೆ ಬಿಡಿ... ಅಂದಹಾಗೆ ನಿಮ್ಮ ಅಡ್ಡ ಹೆಸರು ಏನು?


ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...