August 8, 2007

ಅಂಥದ್ದೇನೂ ಇಲ್ಲ...

ಮಾರನೆಯ ದಿನ ಕೆಲಸಕ್ಕೆ ಹಾಜರಾಗಬೇಕಿತ್ತು. ಒಂದು ವೇಳೆ ಹಾಜರಾಗದ್ದಲ್ಲಿ ಕೆಲಸವನ್ನು ಕಳೆದು ಕೊಳ್ಳುವ ಅವಕಾಶಗಳಿದ್ದವು.ಇದೇ ಕಾರಣಕ್ಕಾಗಿ ಏನಾದರಾಗಲಿ ಎಂದು ಪ್ರಾರ್ಥಿಸುತ್ತಾ ಇವತ್ತೇ ರಾತ್ರಿ ನನ್ನೂರಿನಿಂದ ಹೊರಟ್ಟಿದ್ದೆ. ಬಸ್ಸ್ ಟಿಕೇಟಿಗಾಗಿ ಅದೆಷ್ಟು ಒದ್ದಾಡಿದ್ದೆ. ಕೊನೆಗೂ ಪುಣ್ಯಾತ್ಮನೊಬ್ಬ ಟಿಕೇಟ್ ಕ್ಯಾನ್ಸಲ್ ಮಾಡಿದ್ದರಿಂದ ನನಗೆ ಅವಕಾಶ ಸಿಕ್ಕಿತು. ಆದರೆ ನನ್ನ ದುರಾದ್ರಷ್ಟ ಒಬ್ಬಾತ ಬಂದು ನನ್ನ ಪಕ್ಕದಲ್ಲೇ ಒಕ್ಕರಿಸಬೇಕೆ. ಆತನನ್ನು ಎದ್ದೇಳಿ ಎನ್ನಲು ನನಗೆ ಅಧಿಕಾರವೇ ಇರಲಿಲ್ಲ. ಹಾಗೇ ಒಂದು ವೇಳೆ ಹೇಳಿದ್ದರೂ ನನಗೆ ಸಿಕ್ಕ ಸೀಟನ್ನು ಕಳೆದುಕೊಳ್ಳಬೇಕಾಗುತ್ತಿತ್ತೇನೊ?

ಆಯ್ಯೋ ಇಡೀ ರಾತ್ರಿ ಈ ಯುವಕನೊಡನೆ ಪಯಣಿಸಬೇಕಾಯಿತಲ್ಲ ಎಂಬ ಭಯ ನನ್ನನಾವರಿಸಿತ್ತು. ಹಗಲೊತ್ತಾದರೆ ಕಥೆಯನ್ನೊ,ಕಾದಂಬರಿಯನ್ನೊ ಅಥವಾ ಪತ್ರಿಕೆಯನ್ನೊ ಓದಬಹುದಾಗಿತ್ತು. ಹೊರಗೆ ಮಳೆ ಬೇರೆ ಬರುತ್ತಿದೆ. ಕಿಟಕಿ ತೆರೆದು ರಾತ್ರಿಹೊತ್ತು ಮಿಂಚುವ ಬೆಳಕನ್ನೂ ನೊಡದಾದೆ. ಬರೊಬ್ಬರಿ ೮ ಗಂಟೆ ಉಸಿರು ಗಟ್ಟಿಯಾಗಿಡುದು ಕಂಬಳಿಯನ್ನು ಸುತ್ತಿ ಪಯಣಿಸಲು ಅಣಿಯಾದೆ. ತಟ್ಟನೆ ಹೊಳೆಯಿತು. ಮೊಬೈಲ್ !! ನನಗೀಗ ಬೇಸರ ಕಳೆಯಲು ಇದ್ದ ಏಕೈಕ ಅಸ್ತ್ರವೆಂದರೆ ಮೊಬೈಲ್ . ಮನೆಯಿಂದ ಹೊರಬರುವ ಮುಂಚೆನೇ ಮೊಬೈಲ್ ಪೂರ್ತಿ ಚಾರ್ಚ್ ಮಾಡಿದ್ದೆ. ಬಸ್ಸು ಅದಾಗಲೇ ಹೊರಟಿತ್ತು.

ಮೊಬೈಲ್ ನಲ್ಲಿ ೧೦ ಗಂಟೆ ಆದದ್ದು ನೋಡಿ ‘ಈಗ ರೇಡಿಯೋ ಇಡುವ ಹಾಗಿಲ್ಲ. ಹಾಕಿದ್ರೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳಬೇಕಾಗಿತ್ತು. ಕೇಳುವುದೇನು ಸಮಸ್ಯೆಯಲ್ಲ. ಆದರೆ ಕೇಳ್ತಾನೇ ನಿದ್ದೆ ಬಂದ್ರೆ?... ಅದಿಕ್ಕೆ ಇದ್ದ ಎಲ್ಲಾ ಸ್ನೇಹಿತೆಯರಿಗೂ ಮೆಸ್ಸೆಜ್ ಮಾಡಲು ಪ್ರಾರಂಭಿಸಿದೆ. ಯಾರಾದ್ರೂ ಚಾಟಿಂಗ್ ಗೆ ಸಿಗುತ್ತಾರೋ ಕಾದೆ. ಕೊನೆಗೂ ಇಬ್ಬರು ಸಿಕ್ಕರು. ಒಬ್ಳು ಪಿಯುಸಿ ಪ್ರೆಂಡ್ ಮತ್ತೊಬ್ಬಾಕೆ ಹಾಸ್ಟೆಲ್ ಮೆಟ್ . ಪ್ರೀ ಮೆಸ್ಸೆಜ್ ಇನ್ನೂ ನಲ್ವತ್ತು ಇದ್ದವು. ದುರಾದ್ರಷ್ಟವೆಂಬಂತೆ ರೆಂಜ್ ಕೈಕೊಟ್ಟಿತ್ತು.

ಆ ಪುಣ್ಯಾತ್ಮ ಏನು ಮಾಡುತ್ತಿದ್ದನೋ ತಿಳಿಯದು. ನನಗೊ ಕಣ್ಣು ತುಂಬಾ ನಿದ್ದೆ ಬರುತ್ತಿತ್ತು. ಏನೂ ಮಾಡಬೇಕೆಂದೇ ತೋಚದು.ಅದ್ರೂ ಮೌನವಾಗಿ ಕುಳಿತೆ. ನನ್ನ ಕಾಲೇಜು ದಿನಗಳು, ಅವಕ್ಕೂ ಮುಂಚಿನ ದಿನಗಳೆಲ್ಲವನ್ನೂ ನೆನೆದೆ. ಆ ಸವಿ ನೆನಪುಗಳನ್ನು ನೆನೆದರೆ ನಿದ್ರಾದೇವಿಯೂ ದೂರಾವಾಗುತ್ತಾಳೆ. ಅಂಥಹ ಮಧುರ ಕ್ಹಣಗಳವು.ನಿಜ ಅದೆಷ್ಟು ಹೊತ್ತು ಮೌನವಾಗಿ ಕನಸು ಕಾಣುತ್ತಾ ಕುಳಿತ್ತಿದ್ದೆನೋ ... ಮಧ್ಯದಲ್ಲೊಮ್ಮೆ ಬ್ರೇಕ್ ೧೫ ನಿಮಿಷ ವಿರಾಮ ಕೊಟ್ಟಿದ್ದೇ ಗೊತ್ತಾಗಲಿಲ್ಲ. ಬಸ್ಸು ಅದರಷ್ಟಕ್ಕೆ ಪಯಣಿಸುತ್ತಲಿತ್ತು. ಹಾಡು ಹಾಕುವಂತಿರಲಿಲ್ಲ. ಎಲ್ಲರೂ ಮಲಗಿದ್ದರು. ಬಹುಶ: ಆತನೂ ಮಲಗಿರಬೇಕು... ಅಂತೂ ಕತ್ತಲೆ ಸ್ವಲ್ಪ ಸ್ವಲ್ಪನೇ ಮಾಯವಾಗುತ್ತಿತ್ತು. ಅಬ್ಬ ಪುಣ್ಯಾತ್ಮ ಅವನಷ್ಟಕ್ಕೆ ಇದ್ದ ಎಂದು ಇನ್ನೇನೂ ನಿಟ್ಟಿಸಿರು ಬಿಡಬೇಕೆನ್ನುವಷ್ಟರಲ್ಲಿ ಆತ ಮೇಡಂ i love u ಅನ್ನಬೇಕೆ? ನನಗೆ ಉಕ್ಕಿದ್ದ ಕೋಪ ಅಷ್ಟಿಷ್ಟಲ್ಲ. ಆತನಿಗೆ ಬಯ್ಯೋಣವೆಂದು ಕಣ್ಣೆಲ್ಲಾ ಕೆಂಪಗೆ ಮಾಡಿ ನೋಡಿದ್ರೆ ಆತ ಮಲಗಿದ್ದ. ‘ಲೂಸ್ ಏನೇನೊ ಕನವರಿಸುತ್ತಿದೆ. ಬಹುಶ: ಯಾರನ್ನೋ ಇಷ್ಟಪಟ್ಟಿರಬೇಕು’ ಅಂದುಕೊಂಡು ನನಗೆ ನಾನೇ ಸಮಾಧಾನಿಸುತ್ತಾ ಸುಮ್ಮಗಾದೆ.


ಕಡೆಗೂ ಬಸ್ಸಿಳಿದು ನಾನು ನೆಮ್ಮದಿಯಿಂದ ನನ್ನ ಮುಂದಿನ ಬಸ್ಸಿನೆಡೆಗೆ ಹೋಗುತ್ತಿರುವಾಗ ಆ ಲೂಸ್ ಮತ್ತೆ ನನ್ನ ಹಿಂದೇ ಬರುತ್ತಿದ್ದ. ನನಗೆ ಮುಜುಗರವಾಗುತ್ತಿದ್ದರೂ ಬಹುಶ: ಆತನಿಗೂ ಅದೇ ಬಸ್ಸಿನಲ್ಲಿ ಹೋಗಬೇಕೆನೋ ಎಂದುಕೊಂಡೆ. ಇನ್ನೇನೂ ಬಸ್ಸು ಹತ್ತಬೇಕೆನ್ನುವಷ್ಟರಲ್ಲಿ ‘ಮೇಡಂ ನಿಮ್ಮಲ್ಲಿ ಸ್ವಲ್ಪ ಮಾತನಾಡಬೇಕಿತ್ತು’ ಎಂದು ಆತ ಮನವಿ ಮಾಡುತ್ತಿದ್ದ.ಅವನ ಆ ‘ಮೇಡಂ’ ಕೇಳಿಯೇ ಸಣ್ಣಗೆ ಕಂಪಿಸಿದೆ.

ಆದ್ರೂ ಕಣ್ಣು ಕೆಂಪು ಮಾಡಿ ಏನು ಎಂದೆ. ಆತ ಹೆದರಿದಂತೆ ಕಾಣಲಿಲ್ಲ. ಮೇಡಂ ನಾನು ನಿಮ್ಮನ್ನ ತುಂಬಾ ಇಷ್ಟ ಪಡುತ್ತೇನೆ ನೀವು ಒಪ್ಪುವುದಾದರೆ ಮದುವೆ ಆಗುತ್ತೇನೆ. ಅದೆಲ್ಲಿತ್ತೋ ನನಗೆ ಅಷ್ಟು ಕೆಟ್ಟ ಕೋಪ. ಏನೋ ಮನೆಯಲ್ಲಿ ಹೇಳಿ ಬಂದಿದ್ದಿಯಾ? ನೋಡೋಕೆ ಸಭ್ಯನಂತಿದ್ದಿಯಾ ನಾಚಿಗೆಯಾಗಲ್ವ ಪ್ರೀತಿ ಪ್ರೇಮ ಅಂತ ಕಾಲ ಹರಣ ಮಾಡೋದಿಕ್ಕೆ.ನಂಗಂತೂ ಅದಿಕ್ಕೆಲ್ಲಾ ಸಮಯವಿಲ್ಲ ಜಸ್ಟ್ ಗೆಟ್ ಲಾಸ್ಟ್ ಪ್ರಾಂ ಹಿಯರ್ ಎಷ್ಟು ಸಾಧ್ಯನೋ ಅಷ್ಟು ಕಿರುಚಿದೆ. ’ನೀವು ಮತ್ತೆ ಸಿಗಲ್ಲ ಅಂತ ಗೊತ್ತು ಅದಿಕ್ಕೆ ಈಗಲೇ ಹೇಳಿದ್ದು. ನೀವಂದುಕೊಂಡಷ್ಟು ನಾನೇನೂ ಕೆಟ್ಟವನಲ್ಲ ಬೇಕಿದ್ರೆ ನಮ್ಮನೆಗೆ ಬನ್ನಿ ನನ್ನ ಮಮ್ಮಿ ಜೊತೆ ಮಾತನಾಡಿ ಎಂದ ನಮ್ಮನೆ ಇಲ್ಲೇ ಪಕ್ಕದಲ್ಲಿದೆ ಎಂದ. ಇವನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಕೊಂಡು ‘ಸರಿ ನಿನ್ನ ಮಮ್ಮಿ ಅತ್ರನೇ ಮಾತನಾಡುತ್ತೇನೆ. ಅಕೆಗೂ ಗೊತ್ತಾಗಲಿ ಎಂಥಹ ನೀಚ ಬುದ್ದಿಯ ಮಗನನ್ನು ತಾನು ಹೆತ್ತಿದ್ದೇನೆಂದು ಹೇಳಿದೆ’.

ಹತ್ತು ನಿಮಿಷದಲ್ಲಿ ಆತನ ಮನೆ ತಲುಪಿದೆ. ಆತ ಮನೆಗೋದೊಡನೆ ‘ಮಮ್ಮಿ ನಾನು ಮದುವೆಆಗುವವರು.. ಅವರ ಪರ್ಮಿಷಣ್ ಇನ್ನೂ ಸಿಕ್ಕಿಲ್ಲ’ ಎಂದು ಒಂದೇ ಉಸಿರಲ್ಲಿ ಹೇಳ್ತಾ ಇದ್ದ. ಈಕೆಯೂ ನನ್ನನ್ನು ವಿಚಿತ್ರವಾಗಿ ನೋಡಲು ಶುರುಮಾಡಿದಳು. ನಾನು ಮಾತಿಗಿಳಿದೆ.‘ನೋಡಿ ನಿಮ್ಮ ಮಗನು ದಾರಿ ತಪ್ಪುತ್ತಿದ್ದಾನೆ. ದಾರಿಯಲ್ಲಿ ಪಯಣದಲ್ಲಿ ಸಿಕ್ಕ ಸಿಕ್ಕ ಹುಡುಗಿಯರಿಗೆಲ್ಲಾ ಪ್ರೀತಿ ಪ್ರೇಮ ಎಂದು ತೊಂದರೆಕೊಡುತ್ತಿದ್ದಾನೆ. ಅವನಿಗೆ ಬುದ್ದಿವಾದ ಹೇಳಿ ಮರ್ಯಾದೆಯಾಗಿ ಬದುಕುವುದೇಗೆ ಎಂದು ನಾಲ್ಕು ಬುದ್ದಿ ಮಾತು ಹೇಳಿ... ನನಗೆ ಇದೆಲ್ಲಾ ಇಷ್ಟವಾಗಲ್ಲ. ಇನ್ನು ಮುಂದೆ ನನಗೆ ತೊಂದ್ರೆ ಕೊಟ್ರೆ ಪೋಲಿಸ್ ಕಂಪ್ಲೇಟ್ ಕೊಡಬೇಕಾಗುತ್ತದೆ... ’ ನಾನೂ ಇನ್ನೂ ಏನೇನೋ ಹೆಳಿದೆ.

ಆಕೆ ಮಾತ್ರ ಮರುತ್ತರವನ್ನೇ ನೀಡದೇ ನನ್ನನ್ನೇ ದಿಟ್ಟಿಸುತ್ತಿದ್ದಳು.‘ನಾನಂತೂ ಅವನನ್ನು ಪ್ರೀತಿಸೋಲ್ಲ ನನಗೆ ಸಾವಿರ ಸಮಸ್ಯೆಗಳಿವೆ.ನನ್ನದೇ ಆದ ಸಾವಿರ ತತ್ವಗಳಿವೆ’ ಮತ್ತೂ ಹೇಳಿದೆ. ಆಕೆ ಮಾತು ಮುರಿದು ಕೂಡಿಯೋದಿಕ್ಕೆ ಏನು ಬೇಕು’ ಅಂದಾಗ’ ’ಟ್ಯಾಂಕ್ಸ್’ಅಂದೇಳಿ ಅವರ ಮನೆಯಿಂದ ಹೊರಬಿದ್ದೆ.ಈ ಪ್ರಪಂಚನೇ ಹೀಗೆ ಯಾರನ್ನೂ ಯಾವುದೇ ಕಾರಣಕ್ಕೂ ನೆಮ್ಮದಿಯಿಂದ ಬದುಕೋದಿಕ್ಕೆ ಬಿಡಲ್ಲ ಎಂದುಕೊಂಡು ನನ್ನ ಬಸ್ಸ್ ಹಿಡಿದೆ. (ಸುಮ್ನೆ ಗೀಚಿದ್ದು... ನಿಜವಲ್ಲ)

8 comments:

minugutaare said...

writing style is good. But in your previous post you remarked about bangalore so sad.

veena said...

ninna patragala surimaleyannu noddhe.. your blog is also different and nice...

Amchikelo said...

mangloor kannada bagge sakkat agi barediddeera marayre....
anda hage 'jogi' yava ooru nimgendaru gotta??manglooru anta kansutte alwa??adoo sulya putture irbeku:)...
nice blog .....keep writing.
-sandeep kamath
sandeepkamath822yahoo.com

PRAVINA KUMAR.S said...

ಸುಮ್ನೆ ಗೀಚಿದಾದರೂ ಸುಂದರವಾಗಿದೆ.

Shakshi said...

its festatic

dinesh said...

nice...

Anonymous said...

ಅವನೂ ಸಹ ಸುಮ್ನೆ, ನೀವು ಗೀಚಿದಂತೆ, ನಿಜವಲ್ಲದ ಪ್ರೀತಿಯನ್ನು ವ್ಯಕ್ತಪಡಿಸಿದ್ದಿರಬೇಕು, ನೀವು ಸುಮ್ನೆ ಬಹಳ ಕೋಪ ಮಾಡಿಕೊಂಡಿರಿ, ಅನ್ನಿಸ್ತು. ಚೆನ್ನಾಗಿದೆ. ಬರೆಯುತ್ತಿರಿ.

ನಿಮ್ಮ ಪ್ರತಿಕ್ರಿಯೆಗೆ ದನ್ಯವಾದ, ನಾನು ಇವತ್ತಷ್ಟೆ ನೋಡಿದ್ದು ಅದನ್ನು.

Anonymous said...

Hi Veena...
Very nice articles ....
Yahya Abbas
PRO
Emirates National
Establishment
Dubai

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...