ಯಾಕೋ ಗೊತ್ತಿಲ್ಲ... ಕೆಲವರು ನನಗೆ ಪ್ರತಿನಿತ್ಯ ನೆನಪಾಗುತ್ತಾರೆ. ಅವರಲ್ಲಿ ಪ್ರತೀ ನಿತ್ಯ ಮಾತನಾಡಬೇಕು, ಅವರ ಮಾತುಗಳನ್ನು ಕೇಳಬೇಕು. ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಾನೂ ಆದರ್ಶವಾದಿಯಾಗಬೇಕು ಎಂದು ಅನ್ನಿಸುತ್ತೆ. ನನಗೆ ಎಲ್ಲೆಂದರಲ್ಲಿ ಸ್ನೇಹಿತರು, ಮಾರ್ಗದರ್ಶಕರು... ಸಿಗುತ್ತಾರೆ. ಅದರೆ ಬಹುಕಾಲ (ಈಗಲೂ) ಹಚ್ಚಹಸಿರಾಗಿ ನನ್ನ ಮನಪಟಲದಲ್ಲಿ ಇರುವವರು - ನನ್ನ ಶಿಕ್ಷಕಿ ರತಿ ಮೇಡಂ, ಲೇಖಕಿ ನೇಮಿಚಂದ್ರ, ನನ್ನ ಸೀನಿಯರ್ ಶ್ರಿದೇವಿ, ನಟಿ ತಾರಾ, ನಿರೂಪಕಿ ಅಪರ್ಣಾ, ಡಾಕ್ಟರ್ ಬೀನಾ, ಪೂರ್ಣಿ, ಪಕದ್ಮನೆಯ ಯಶೋಧಕ್ಕ.
ಇವರನ್ನೆಲ್ಲಾ ನನ್ನ ಜೊತೆಯಲ್ಲೇ ಇರಿಸಬೇಕೆಂದು ಬಯಸುತ್ತೇವೆ. ಅವರ ಜೊತೆ ಕಳೆದಂತಹ ಅಮುಲ್ಯ ಕ್ಷಣಗಳನ್ನು ಮೆಲುಕು ಹಾಕುತ್ತಿರುತ್ತೇನೆ. ಅವರಿಗೆಲ್ಲಾ ಅದೆಷ್ಟು ಬಾರಿ ಎಸ್ ಎಮ್ ಎಸ್ ಕಳುಹಿಸಿ ಉಪದ್ರ ಮಾಡಿದೆನೋ!!.
ಅದ್ರೂ ಅವರ ಜೊತೆ ಮಾತನಾಡಿದಾಗೆಲ್ಲಾ ಒಂದು ರೀತಿಯ ಖುಷಿಯಾಗುತ್ತೆ. ಮೆಸೇಜ್ಗೆ ಮರುತ್ತರ ಬಂದ್ರೆ ವ್ಹಾರೆವ್ಹಾ ಗ್ರೇಟ್ ಎಂಬ ಉದ್ಗಾರ ಬರುತ್ತೆ.
January 24, 2008
January 18, 2008
ಯಾದ್ ವಶೇಮ್ ೨
ನೇಮಿಚಂದ್ರರವರ ಕಾದಾಂಬರಿಯಲ್ಲಿ ಇಂತಹ ಹಲವು ಮನತಟ್ಟುವ ವಾಕ್ಯಗಳಿವೆ. ದಿನನಿತ್ಯ ಬಳಸಬಹುದಾದ ಡೈಲಾಗುಗಳಿವೆ. ನನಗಿಷ್ಟವಾಗಿದೆ. ಬಹುಶಃ ನಿಮಗೂ ಇಷ್ಟವಾಗಬಹುದು. ಓದಿ ನೋಡಿ.
- ಬದುಕಬೇಕು ಹಂಚಿಕೊಂಡು, ಬದುಕಬಹುದೆ ಕಿತ್ತುಕೊಂಡು?
- ಹೇಗೆ ವಿವರಿಸಲಿ ಭಾರತವನ್ನು? ಒಂದು ಧರ್ಮ, ಒಂದು ದೇವರ ಈ ನೆಲದಲ್ಲಿ ನಿಂತು ನೂರು ಧರ್ಮ, ಸಾವಿರ ಸಾವಿರ ದೇವರುಗಳ ನಾಡಿನ ಬಗ್ಗೆ ಹೇಗೆಂದು ವಿವರಿಸಲಿ. ಮುಕ್ಕೋಟಿ ದೇವರುಗಳು... ಅವರನ್ನು ಸಹಸ್ರ ಸಹಸ್ರ ನಾಮದಲ್ಲಿ ಕರೆಯುತ್ತಾರೆ. ಕೂಗುತ್ತಾರೆ, ಶಪಿಸುತ್ತಾರೆ, ಬೇಡುತ್ತಾರೆ, ಬೈಯುತ್ತಾರೆ, ಮುನಿಯುತ್ತಾರೆ, ರಾಜಿಯಾಗುತ್ತಾರೆ... ಸಾವಿರ ಹೆಸರಿಟ್ಟು ಕೂಗಿ ಕೊನೆಗೆ ದೇವನೊಬ್ಬನೇ ಎನ್ನುತ್ತಾರೆ.
- ನನ್ನನ್ನು ಕಾಡಿದ್ದು ಇತಿಹಾಸದ ಸಾವುಗಳಲ್ಲ, ವರ್ತಮಾನದ ಸಾವುಗಳು. ಭವಿಷ್ಯದ ಸಾವುಗಳು. ನಾನು ನಿನ್ನೆಗಳ ನೂರು ನೋವನ್ನು ಮರೆಯಲು ಸಿದ್ದ. ನಾಳೆಗಳ ಭರವಸೆಯನ್ನು ಯಾರಾದರೂ ನನಗೆ ನೀಡಿದರೆ...
- ಮನುಷ್ಯ ಮನುಷ್ಯನ ನಡುವೆ ದ್ವೇಷವಿಲ್ಲದ, ಗೋಡೆ ಇಲ್ಲದ ಗುಮಾನಿ ಇಲ್ಲದ ಪೂರ್ಣ ವಿಶ್ವಾಸದ ಒಂದು ಸುಂದರ ಸಂಬಂಧದ ಸೇತುಬಂಧದ ಕನಸು ನನ್ನದು.
- ಸಾವಿರ ವರ್ಷಗಳಿಂದ ಜೊತೆಗೆ ಬದುಕಿದ್ದ ಮುಸ್ಲಿಂಮರು, ಯಹೂದಿಗಳೇಕೆ ಒಂದಾಗಲು ಸಾಧ್ಯವಿಲ್ಲ? ಸಾಧ್ಯವಿಲ್ಲವೆ ಮನಸ್ಸು ಮಾಡಿದರೆ ಒಡೆದ ಮನಸ್ಸುಗಳನ್ನು ಕೂಡಿಸಲು? ಸಾಧ್ಯವಿಲ್ಲವೆ ಶಾಂತಿಗೊಂದು ಅವಕಾಶ ನೀಡಲು? ನಡುವೆ ಎಳೆದ ಗಡಿಗಳನ್ನು, ಗೆರೆಗಳನ್ನು ಅಳಿಸಿ ಕದನ ವಿರಾಮಕ್ಕೆ ಕರೆ ನೀಡಲು ಸಾಧ್ಯವೇ ?
- ಇತಿಹಾಸದ ತಪ್ಪುಗಳನ್ನು ತಿದ್ದಲು ಹೊರಟರೆ, ಹೊಸ ತಪ್ಪುಗಳನ್ನು ಮಾಡುತ್ತೇವೆ. ಇತಿಹಾಸವನ್ನು ಭೂಪಕ್ಕೆ ಬಿಟ್ಟುಬಿಡುವುದು ಮೇಲು. ಭವಿಷ್ಯದ ಭರವಸೆಯಷ್ಟೇ ನಮಗಿರಲಿ. ಮತ್ತೆಂದೂ ಯಾವ ದೇವಲಯವೂ ಒಡೆಯದಿರಲಿ. ಯಾವ ಮಸೀದಿಯು ಉರುಳದಿರಲಿ. ಜನರ ಮನಸ್ಸಿನಲಿ ಕಟ್ಟಿದ ನಂಬಿಕೆಯ ಗೋಪುರಗಳು ಕುಸಿಯದಿರಲಿ. ಯಾವ ಮಾನವನೂ ಮತ್ತೆ ಶಿಲುಬೆಗೇರದಿರಲಿ.
- ಏಕೋ ಮನಸ್ಸಿಗೆ ಹಿತವಿಲ್ಲ. ಏನು ವಾದಿಸುತ್ತಿದ್ದೇನೆ? ಏಕೆ ವಾದಿಸುತ್ತಿದ್ದೇನೆ? ಇಂದಿನ ಸಮಸ್ಯೆಗೆ ಸಾವಿರ ಸಾವಿರ ವರ್ಷಗಳ ಕತೆಯೇಕೆ ಬೇಕು?
- ದಿಟದಲ್ಲಿ ದ್ವೇಷಕ್ಕೆ ಕಾರಣಗಳಿರಲಿಲ್ಲ. ನೆಪಗಳು ಮಾತ್ರವಿದ್ದವು.
- ಉತ್ತರಗಳ ಹುಡುಕಬೇಕಿದೆ ಪ್ರಶ್ನೆಯಾದ ಗೋಡೆಯಾಚೆಗೆ
- ಭೂತದ ಭೂತಗಳನ್ನು ಉಚ್ಚಾಟಿಸಿ ಭವಿಷ್ಯದತ್ತ ಮುಖ ಮಾಡಿ ಹೊರಟ ಝಳಕು ಆ ಎಳೆಯ ಕಣ್ಣುಗಳಲ್ಲಿತ್ತು!
- ನಾನು ಬದುಕುವೆ, ಬದುಕಬೇಕು. ಇದಕ್ಕಿಂತ ಹೆಚ್ಚಿನದು ಏನು ಆಗಬಲ್ಲದು. ನರಕದ ಪಾತಾಳಕ್ಕೆ ತಲುಪಿ ನಿಂತ ಮೇಲೆ ಇನ್ಯಾರ ಭಯ, ಇನ್ಯಾತರ ಭಯ.
Subscribe to:
Posts (Atom)
ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'
'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...
-
ಶ್!! ಇದು ಮೌನದ ಸಮಯ. ಮಾತು ಮರೆಯುವ ಸಮಯ. ಮನದಲ್ಲಿ ನೂರು ನೋವುಗಳು ತುಂಬಿರುವ ಸಮಯ. ಹೌದು. ಇದು ವಿದಾಯ ಹೇಳುವ ಸಮಯ.... ಹೆದರಬೇಡಿ ನಾನು ಬ್ಲಾಗಿಗಾಗಲೀ, ಬ್ಲಾ...
-
ಮಾರನೆಯ ದಿನ ಕೆಲಸಕ್ಕೆ ಹಾಜರಾಗಬೇಕಿತ್ತು. ಒಂದು ವೇಳೆ ಹಾಜರಾಗದ್ದಲ್ಲಿ ಕೆಲಸವನ್ನು ಕಳೆದು ಕೊಳ್ಳುವ ಅವಕಾಶಗಳಿದ್ದವು.ಇದೇ ಕಾರಣಕ್ಕಾಗಿ ಏನಾದರಾಗಲಿ ಎಂದು ಪ್ರಾರ್ಥಿಸುತ್...
-
ನಾನು ಚಿಕ್ಕವಳಿದ್ದಾಗ ಅಂದುಕೊಳ್ಳುತ್ತಿದ್ದೆ. ನಾವೆಲ್ಲಾ ವಿಜ್ಜಾನಿಗಳಾಗ ಬೇಕಿದ್ದರೆ ವಿಜ್ಜಾನ ವಿಭಾಗದಲ್ಲಿ ಪದವಿಪಡೆಯಬೇಕೆಂದು. ಅದರೆ ಕೊಪ್ಪದ ನರಸಿಂಹ ಭಂಡಾರಿಯವರೊಡನೆ ...