February 27, 2008

ನನ್ನ ಸಾವಿಗೆ ನಾನೇ ಕಾರಣ!!!

ಆತ್ಮಹತ್ಯೆ ಮಾಡುವವರು ದೈರ್ಯಶಾಲಿಗಳಾ ಅಥವಾ ಹೇಡಿಗಳಾ? ಆತ್ಮಹತ್ಯೆ ಮಾಡಲು ಸಾಮಾನ್ಯರಿಗಂತೂ ಅಸಾಧ್ಯವಂತೆ ನಿಜನಾ?ಸಾವಿಗೆ ಹೆದರದವರು ಯಾರಿಗೆ ಹೆದರಿ ಸಾವಿಗೆ ಶರಣಾಗುತ್ತಾರೆ?
ಕಳೆದ ಹಲವಾರು ವರ್ಷಗಳಿಂದ ಮಾಧ್ಯಮಗಳಲ್ಲಿ ಪ್ರಕಟವಾದಂತಹ ಆತ್ಮಹತ್ಯೆ ಪ್ರಕರಣಗಳಲ್ಲಿ ‘ನನ್ನ ಸಾವಿಗೆ ನಾನೇ ಕಾರಣ’ ಎಂಬ ಪತ್ರ ಬರೆದು ಆಕೆ/ಆತ ಸಾವಿಗೆ ಶರಣಾಗಿದ್ದಾಳೆ/ನೆ ಎಂಬ ವಾಕ್ಯವನ್ನು ಓದುತ್ತಿರುತ್ತೇವೆ.

ಆತ್ಮಹತ್ಯೆ ಮಾಡುವ ಮನಸ್ಸು ಜನರಿಗೆ ಹೇಗೆ ಬರುತ್ತೆ? ಬಂದಂತಹ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಇಲ್ಲವೇ? ಅಥವಾ ಪ್ರಪಂಚದಲ್ಲಿ ತಾನೇ ಈ ಪರಿಯ ದುಃಖ ಬೇಸರವನ್ನು ಅನುಭವಿಸುತ್ತಿದ್ದೇನೆ. ಉಳಿದವರೆಲ್ಲರೂ ಅದ್ರಷ್ಟಶಾಲಿಗಳು. ತಾನು ಮಾತ್ರ ಈ ಪ್ರಪಂಚಕ್ಕೆ ಬಾರವಾಗಿಬಿಟ್ಟೆ ಎಂಬ ದುರ್ಬಲ ಯೋಚನೆಗಳೇ ಆತ್ಮಹತ್ಯೆ ಮಾಡಲು ಪ್ರಚೋದಿಸುತ್ತವೆಯೇ? ತಾವು ಎದುರಿಸಿದ ಕಷ್ಟಗಳನ್ನೇ ಈ ಜನ ಯಾಕೆ ಚಾಲೆಂಚ್ ಆಗಿ ಸ್ವೀಕರಿಸುವುದಿಲ್ಲ? ತನ್ನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಇವರು ಯಾಕೆ ಸಾಧಿಸಿ ತೋರಿಸಬಾರದು. ಒಂದಿಬ್ಬರು ಏನೋ ಹೇಳಿದ ಮಾತ್ರಕ್ಕೆ, ಮೋಸ ಮಾಡಿದ ಮಾತ್ರಕ್ಕೆ, ಸುಳ್ಳು ಅರೋಪ ಹೊರಿಸಿದ ಮಾತ್ರಕ್ಕೆ, ಅಪಪ್ರಚಾರ ಮಾಡಿದ್ದಕ್ಕೆ, ತನ್ನ ಘನತೆಗೆ ದಕ್ಕೆ ಬರುವಂತೆ ವರ್ತಿಸಿದ್ದಕ್ಕೆ, ತನ್ನಿಂದ ತಪ್ಪಿಲ್ಲದಿದ್ದರೂ ಅಪರಾಧಿ ತರಹ ನೋಡಿದ್ದಕ್ಕೆ, ಅದ್ಯಾರೊ ಸುಮ್ ಸುಮ್ನೆ ಬೈದದಕ್ಕೆ ಅತ್ಯಹತ್ಯೆ ಒಂದೇ ದಾರಿಯಾಗಿ ಬಿಟ್ಟಿತ್ತೇ?

ಸಾವಿನ ನಂತರ ಸ್ವರ್ಗ ಮತ್ತು ನರಕ ಗಳೆರಡು ಸ್ಥಳಗಳಲ್ಲಿ ಒಂದಕ್ಕೆ ಹೋಗಬೇಕಾದ ಅನಿವಾರ್ಯ ಇದೆ ಎಂದರಿತ ಜನ ಸಾಯುವ ಮುಂಚೆ ‘ ನನ್ನ ಸಾವಿಗೆ ನಾನೇ ಕಾರಣವೆಂದು ಬರೆದು ಉಳಿದವರಿಗೆ ಆಗಬಹುದಾದ ಶಿಕ್ಷೆ ತಪ್ಪಿಸಿ, ಅವರಿಂದ ಸತ್ತವರು ಗ್ರೇಟ್ ಎನ್ನಿಸಿದಾಕ್ಷಣ ಆತ್ಮಹತ್ಯೆ ಮಾಡಿದವರಿಗೆ ಸ್ವರ್ಗ ಶಿಕ್ಷೆ ಲಭಿಸುತ್ತೇನು?

ಹಾಗೇ ಪತ್ರ ಬರೆದಾಕ್ಷಣ ಎಲ್ಲಾ ಪರಿಹಾರವಾಗುತ್ತಾ? ಆಕೆ / ಆತನ ಸಾವಿಗೆ ಮನೆಯವರೊ/ ಸ್ನೇಹಿತರೊ ಅಥವ ಇನ್ನಾರೊ ಕಾರಣ.. ಇಲ್ಲದಿದ್ದರೆ ಆಕೆ/ಆತ ಆತ್ಮಹತ್ಯೆ ಮಾಡುತ್ತಿರಲಿಲ್ಲ ಎಂಬ ಹುಳ ಎಲ್ಲರ ಮನದಲ್ಲೂ ಮನೆಮಾತಾಗಿರುವುದಿಲ್ಲವಾ?

ಅನ್ಯಾಯ ಕಂಡಾಕ್ಷಣ ಸಾವಿಗೆ ಶರಣಾಗುವ ಬದಲು ಅನ್ಯಾಯವನ್ನು ದಿಟ್ಟವಾಗಿ ಪ್ರತಿಭಟಿಸಿ ಸಾಯಲು ಸಿದ್ದರಿರಬೇಕೆಂದು ಯಾಕೆ ಯಾರು ಯೋಚಿಸುತ್ತಿಲ್ಲ. ಆತ್ಮಹತ್ಯೆ ಮಾಡಲೇ ಬೇಕೆಂಬ ಇಚ್ಛೆ ಇದ್ದರೆ ಪ್ಲೀಸ್ ಮೊದಲು ಏನನ್ನಾದರೂ ಸಾಧಿಸಿ... ನಿಮ್ಮಿಂದ ಒಂದಿಬ್ಬರಿಗಾದರೂ ಒಳಿತಾಗಲಿ. ನಿಮ್ಮ ಸಾವಿನಿಂದ ಇತರರಿಗೆ ತ್ರಪ್ತಿ, ನೆಮ್ಮದಿ, ಸಂತೋಷ ಸಿಗುತ್ತದೆ ಎಂಬ ತಪ್ಪು ಕಲ್ಪನೆ ಖಂಡಿತ ಬೇಡ. ವಿದ್ಯಾವಂತರಾಗಿಯು ಚಿಲ್ಲರೆ ವಿಷಯಗಳಿಗೆ ನೊಂದು ಆತ್ಮಹತ್ಯೆ ಮಾಡಲು ಮುಂದೆ ಹೋಗುವ ನೀವುಗಳು ಹೇಡಿಗಳೇ ಸರಿ...

ನಿಮ್ಮ ಜನನಕ್ಕೆ ನೀವು ಕಾರಣವಲ್ಲ! ಆಗಿದ್ದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಹಕ್ಕು ನಿಮಗಿಲ್ಲ.. ಪ್ರಪಂಚದಲ್ಲಿ ಅದೆಷ್ಟು ಮಂದಿ ತಮ್ಮ ಕುಟುಂಬದವರನ್ನೆಲ್ಲಾ ಕಳೆದು ಕೊಂಡು, ಭಯಾನಕ ಖಾಯಿಲೆ ಬಂದಿದ್ದರೂ ನೊಂದು ಕೊಳ್ಳದೇ ಬದುಕಿ ಸಾಧಿಸಿದ್ದಾರೆ. ನಮ್ಮ ನಾಳೆಗಳು ನಮಗಾಗಿ ಕಾದಿರುತ್ತವೆ. ಅವುಗಳನ್ನು ಹಸನ್ಮುಖದಿಂದ ಸ್ವೀಕರಿಸೋಣ.

ಮತ್ತೂ ಸಾಯಲೇ ಬೇಕೆಂದು ನಿರ್ಧರಿಸಿದ್ದರೆ ಒಂದ್ನಿಮಿಷ... ನಿಮ್ಮ ಸುತ್ತಮುತ್ತಲು ನಡೆಯುವ ಹಗರಣ, ಮೋಸ, ವಂಚನೆಗಳನ್ನು ಬಯಲಿಗೆಳೆದು she/he is great ಅಂತ ಅನ್ನಿಸಿಕೊಳ್ಳಿ.. ಬಹುಶಃ ಆ ಹೊತ್ತಿಗೆ ನಿಮ್ಮ ಆತ್ಮಹತ್ಯೆಯ ಯೋಚನೆ ಮಾರುದೂರ ಹೋಗಿರುತ್ತೆ.

4 comments:

Anveshi said...

ವೀ ಅವರೆ,

ಆತ್ಮಹತ್ಯೆ ಮಾಡ್ಕೊಳೋದು ಮಹಾಪಾಪ. ಹೌದು. ಆದ್ರೆ ಪಕ್ಕದ್ಮನೆ ಬಾವಿಗೆ ಹಾರೋದು...? ಬ್ಯಾಡಪ್ಪಾ ಬ್ಯಾಡ... ಆತ್ಮಹತ್ಯೆ ಮಾಡ್ಕೊಳೋದಿದ್ರೂ ಪರವಾಗಿಲ್ಲ...

ಸಾಯಲೇಬೇಕೆಂದಿದ್ರೆ ನಿಮ್ಮ ಕೊನೆಯ ಸಾಲಿನ ಸಲಹೆ ತುಂಬಾ ಇಷ್ಟವಾಯ್ತು...ಏನಾದ್ರೂ ಸಾಧಿಸಿ ತೋರಿಸಲು ಪ್ರೇರಣೆ...

ಅಮರ said...

ಪ್ರಿಯ ವೀಣಾ ಅವರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

- ಅಮರ

sree-2007 said...

I wish i could able to read Kannada properly. I laready started learning the letters again. Hope i could able to read ur wrintings soon...Thanks for coomenting. Please keep on visting and express ur views.

Unknown said...

Registration- Seminar on KSC's 8th year Celebration


Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...